Thursday, 30 June 2011

ಹನಿಗವನಗಳು

-----------------
1 ಕಸಿ
----------
ನಲ್ಲೇ..........
ನೀ
ಕಸಿ ಮಾಡಿ
ನೆಟ್ಟು
ಬೆಳೆಸಿರುವ ಸಸಿಗಳಂತೆ
ನಾ ಕಟ್ಟಿರುವ
ಕವಿತೆಗಳು.
2 ಪರಾಂಭರಿಸು
-------------
ಮನಸಿನಾಳದ ಬಯಕೆಗಳ
ಮೆಲುಕುಗಳು
ಆಡುವ ಮಾತಿನಲಿ ಬರದು
ಗೆಳತೀ
ಅದನು
ನನ್ನ ಕಣ್ಣಂಚಿನ
ಪ್ರತಿಬಿಂಬದಲಿ ಇಣುಕು.
3 ಕತ್ತಲೆ
----------
ಕತ್ತಲೆಯ ಓಡಿಸಲೆಂದು
ನೂರಾರು ಮೊಂಬತ್ತಿಗಳ
ಹಚ್ಚಿಟ್ಟೆ,
ಬತ್ತಿ ಬೆಳಗಿತು
ಬೆಳಕು ಹರಿಯಿತು
ಮೇಣ ಕರಗಿತು
ಕತ್ತಲೆ ಮಾತ್ರ
ಓಡಲೂ ಇಲ್ಲಾ
ಕರಗಲೂ ಇಲ್ಲಾ
ಇದ್ದಲ್ಲಿಯೇ ಇತ್ತು.
4 ಹನಿಮೂನ್
------------
ಸ್ವಚ್ಛಂದ ಬಾಳಿನಲಿ
ಚಕ್ಕಂದ ಆಡುತಿರುವ
ಯುವ ಜೋಡಿ ಏನ್ ಅಂದ ಏನ್ ಚೆಂದ
ಇದೇ ಅವರ
ಮಧು ಚಂದ್ರ.
5 ನೆನಪು
-----------
ತೊಟ್ಟಾಗ ನವನವೀನ ಉಡುಪು
ಮೈಮನ ನಿಮಿರುವ ಹೊಳಪು
ಹೌದು!
ಅಂದಾಗಿದ್ದಳು ಆಕೆ
ನನಗೆ ಮಾತ್ರ ಮುಡಿಪು
ಎಂದು ಕಾಡುವುದೆಲ್ಲ ಹಳೇ ನೆನಪು.
6 ಅನ್ನ
----------
ಬಾ
ಸುಮತೀ
ನಾನುಣಿಸುವೆ
'ಭಾಸುಮತಿ'.
7 ವಿರಹ
---------------
ಸಖೀ
ನೀ ನನಗೆ ನಿಕ್ಕಿ
ಇದರಿಂದ
ನಾ ತುಂಬಾ ಲಕ್ಕಿ
ನನ್ನ ಬಳಿ ನೀನಿರದಿರೆ
ನಾಅಳುವೆ ಬಿಕ್ಕಿ ಬಿಕ್ಕಿ.
8 ಕರಾರು
------------
ಪ್ರಿಯಕರಾ.......
ನೀ ನನ್ನ
ಮದುವೆ ಆದ ಮೇಲೆ
ಬೀರು ಬಾರಿಗೆ ಹೋಗಲು
ನನದಿಲ್ಲ ತಕರಾರು,
ಆದರೆ
ತಿಂಗಳ ಪೂತರ್ಿ ಸಂಬಳ ಮಾತ್ರ
ನನ್ನ ಕೈಗೆ
ಕೊಡಬೇಕೆನ್ನುವುದೇ
ನನ್ನ ಕರಾರು.
9 ಪ್ರಿಯ ತಮ್ಮ
---------------
ಪ್ರಿಯತಮಾ........
ಎಂದು ಕರೆಯದಿರು ಚಿನ್ನಾ
ನಿನ್ನ ಸೊಳ್ಳೆರಾಗದಿ ಅದು
ಪ್ರಿಯತಮ್ಮಾ ಎಂದಾಗಿ
ಅಣುಕಿಸುವುದು ನನ್ನ.
10 ಆಸರೆ
------------
ಪ್ರಿಯೇ.......
ನೀ ಬಳ್ಳಿಯಂಗೆ
ಸುತ್ತಿ ಬಳಸುವುದಾದರೆ
ನಾ
ಹೆಮ್ಮರವಾಗಿ ಬೆಳೆದೇನು!
20 ಮಗುವಿಗೆ ಸಿಗುವುದು
------------------
ಮಹಿಳೆಯಿಂದ
ಮುದ
ಪುರುಷನಿಂದ
ಮದ.
21 ಪುರುಷನಿಗೆ
----------------
ಅವಳನ್ನು
'ಚಿನ್ನ'
ಎಂದು ಕರೆದರೆ
ನೀ
11 ಚುಟುಕು
---------------
ಮೊಟಕಾಗಿ ಕಂಡರೂ
ನಾಟುವಂತೆ
ಕುಟುಕುವುದು
ಕಟುಕನನ್ನೂ ಕೂಡಾ.
12 ಕಲ್ಪನೆ
------------
ಇಲ್ಲದ ಸಂಗತಿಗಳ
ಸಂತತಿಗಳೇ
ಕವಿಯ ಕಲ್ಪನೆಗಳ
ಸಂಗಾತಿಗಳು.
13 ಸ್ತುಪ್ತತೆ
------------
ಬಾಯಿ ತುಂಬಾ
ಮಾತುಗಳನ್ನಾಡಿದಾಕ್ಷಣ
ಭಾವನೆಗಳು
ಬಿಚ್ಚಿಕೊಳ್ಳವು ಗೆಳತೀ,
ದಿನ ಪೂತರ್ಿ
ಮೌನ ಆವರಿಸೇ
ಬಯಕೆಗಳು
ಕಚ್ಚಿಕೊಳ್ಳವು ಎನ್ನೊಡತೀ.
14 ಒಲವು
---------------
ಬರಿಗಣ್ಣಿಗೆ ಕಾಣದ್ದು
ಇರಬಹುದು
ಹಲವು
ಅದರಲ್ಲೊಂದು
ನನ್ನ ನಲ್ಲಗೆ
ತಿಳಿಯದ
ನನ್ನೊಲವು.
15 ಬರ
------------
ಬರಗಾಲದ ಬವಣೆಯಲ್ಲಿ
ಬತ್ತಿದುದು
ಬಾವಿ,ಕೆರೆ,ಕೋಡಿ ಮಾತ್ರವಲ್ಲ
ಬಡ ಕವಿಯ
ಲೇಖನಿಯ 'ಮಸಿ' ಕೂಡ
16 ಸಾಲ
--------------
ಹನುಮಂತನ
ಬಾಲದಂತೆಯೆ ಬೆಳೆದು
ಕೊನೆಗೆ ಅದೇ
ಶೂಲವಾಗುವುದು.
17 ಕಾಡುವಿಕೆ
--------------
ಬಂದಾಗ ಎಪ್ರೀಲು
ಆಗಿಬಿದುವುನೇನೋ ಫೂಲು
ಎಂಬುದು ಅದೊಂದು ದಿನದ
ಫೀಲು.
18 ಸುವೃಷ್ಠಿ?
----------
ಆ ಶೃಷ್ಠಿಯಲಿ
ಅಕಾಲದಲಿ ಆಗುವುದು
ಅನಾವೃಷ್ಠಿ,
ಸಕಾಲದಲ್ಲಿ ಆಗುವುದು
ಅತಿವೃಷ್ಠಿ,
ಪಂಚಾಂಗಗಳಲ್ಲಿ ಬರೆದಿರುವುದು ಮಾತ್ರ
ಸುವೃಷ್ಠಿ.
19 ಗದ್ದೆ ನೆಟ್ಟಿ
------------
ಇರಬಹುದು
ಪುರುಷರ ಎದೆ ಗಟ್ಟಿ
ಆದರೆ
ಮಹಿಳೆಯರದು ಸೊಂಟ ಗಟ್ಟಿ,
ಹಾಗಾಗಿ
ಅವಳು ಮಾತ್ರ ಮಾಡುವಳು
ಗದ್ದೆ ನೆಟ್ಟಿ.
'ಕಬ್ಬಿಣ'
ಆಗುವ ಸಂಭವ.
22 ಹೊಂದಾಣಿಕೆ
----------------
ಬೆಳ್ಳೀ ಬಟ್ಟಲ ತುಂಬೆಲ್ಲಾ
ಬಿಡಿ ಬಿಡಿಯಾಗಿ
ಹರಡಿಕೊಂಡಿವೆ,
ಸಂಕ್ರಾಂತಿ ಕಾಳುಗಳು.
------23 ಭಾಸ-----
ಹೆಕ್ಕಿ ಹೆಕ್ಕಿ
ತಿನ್ನುತಿಹುದು
ಗಗನ ಚುಕ್ಕಿಗಳ
ಈ ಭೂಮಿ ಹಕ್ಕಿ.
24 ನಕ್ಷತ್ರಗಳು
-------------
ಬಿಳಿ ಹೊಲದಲ್ಲಿ
ಕಪ್ಪು ಅಕ್ಷರಗಳನ್ನು
ಬಿತ್ತುವವ.

25 ಕಲ್ಪನೆ
------------
ಆಗಸದ ಚಿಕ್ಕೆಗಳು
ಸೂರ್ಯ ಚಂದ್ರರ
ಇಕ್ಕೆಗಳು.
26 ಬೆಸುಗೆ
-----------
ಹೊಲಿಯೋಣ
ಬಾ ಬಾಲೆ
ಹರಿದು ಚಿಂದಿ ಚಿಂದಿ ಆಗಿಬಿಟ್ಟಿದೆ
ಮುಗಿಲು,
ಬೇಗ ತಾ ನೂಲು.
ಹೊಂದಾಣಿಕೆ
-------------
ದೇವರಿಗೆ ಹಾಕಲಿರುವ
ಕಾಣಿಕೆ
ಮಾಡದಿದ್ದರೂ ಪರವಾಗಿಲ್ಲ
ಎಣಿಕೆ,
ಏಂಕೆಂದರೆ
ದೇವರಲ್ಲಿಯೂ ಇದೆ,
ಕೊಟ್ಟು ತೆಗೆದುಕೊಳ್ಳುವ
ಹೊಂದಾಣಿಕೆ.
28 ತಾರೆಗಳು
----------------
ನೀಲಿ ಅಂಗಿಯ ತುಂಬೆಲ್ಲಾ
ಬಂಗಾರದ ಗುಂಡಿಗಳು.
29 ವ್ಯತ್ಯಾಸ
---------------
ಹೇಳೀ ಕೇಳೀ ಬರದು
ಆಕಳಿಕೆ,
ಮನಸ್ಪೂತರ್ಿಯಿಂದ ಬರುವುದು
ಆಲಿಕೆ.
30 ಉಪಗ್ರಹಗಳು
---------------
ರೆಕ್ಕೆ ಪುಕ್ಕಗಳಿರದಿದ್ದರೂ
ಹಾರಾಡುವವು
ನೀರಿಲ್ಲದಿದ್ದರೂ
ಈಜಾಡುವವು.
31 ಸುಲಭ
---------------
ಅವಳ
ಹೆಸರೇನೆಂದಿರಾ?
ಅವಳ್ಹೆಸರೇ...........
ಇಂದಿರಾ.
32 ಅತಿಯಾದಾಗ
----------------
ನಲ್ಲೆಯ ಪ್ರೇಮ ಸಲ್ಲಾಪದ
ಆಲಿಕೆ
ತಡೆಯಲಾಗುತ್ತಿಲ್ಲ
ಆಕಳಿಕೆ.
33 ನಲ್ಲೆಯ ನೆನಪು
----------------
ಆಲದ ಮರದ ಬೇರುಗಳಂತೆ
ನನ್ನ ನರನಾಡಿಗಳಲ್ಲೂ
ತುಂಬಿ ಕೊಂಡಿಹುದು.
34 ಎಂಬತ್ತರ ಬದುಕು
----------------
ಉರಿದು
ಮುಗಿಯುತ್ತಾ ಬಂದಿರುವ
ಮೊಂಬತ್ತಿಯಂತೆ.
35 ಕಾರಣ
------------
ಚಿಕ್ಕವರ ಬಾಯಿಯಲ್ಲಿ
ದೊಡ್ಡ ಮಾತು ಬರಲು
ಮೂಲ ಕಾರಣ.........
ದೊಡ್ಡವರು ಮಾಡಿದ
ಚಿಕ್ಕ ತಪ್ಪು.
36 ನಿವರ್ಾಹಕ
-------------
ಸಾವಿರಾರು ಜನರಿಗೆ
ನೀರು ಕುಡಿಸಿದ ಭೂಪ!
ಈತ
ಕಲ್ಯಾಣಮಂಟಪದ ಊಟದ ಪಂಕ್ತಿಯಲ್ಲಿ
ನೀರ್-ವಾಹಕ.
37 ಪ್ರೀತಿ
------------
ಚಿಕ್ಕವರು ಮಾಡಿದರೆ
ಪೆಪ್ಪರಮೆಂಟು
ದೊಡ್ಡವರು ಮಾಡಿದರೆ ಫನಿಶ್ಮೆಂಟು.
38 ಯಮ_ಪೂರಿ
--------------
ಇಲ್ಲೊಬ್ಬ ಇಂದು ಕಂಡ
ಯಮಪುರಿ,
ಕಾರಣ
ಹೊಟ್ಟೆ ಬಿರಿ ತಿಂದಿದ್ದ
ಉಬ್ಬಿದ ಪೂರಿ.
39 ನನ್ನಿನಿಯ
------------
ಸರ್ವರಿಗೂ
ಸಾಮಾನ್ಯನಾದ
ಈ ಅಸಾಮಾನ್ಯದವ
ನನಗೆ ಮಾತ್ರ
ಸರ್ವಸ್ವ.
40 ಅರವತ್ತರ ನಂತರ............
-------------------------
ಅರವತ್ತರ ಅನಂತರ
ಅವಲಕ್ಕಿ ಗಂಜಿ,
ಎಂದು ಅಲವತ್ತುಕೊಂಡರೆ...........
ಉದುರಿ ಹಲ್ಲುಗಳು
ಉದ್ಭವಿಸಿಯಾವೇ?
41 ಸಂದಾಯ
-------------
ಚೆಲುವೇ,
ೆನಿನ್ನ ಒಲವೇ
ನನಗೆ ಸಂದಾಗ
ಭಾದಿಸಲಾರದು
ಇನ್ಯಾವುದೇ
ಸೋಲು ಗೆಲುವು.
42 ಬಂಧನ
-----------
ಎನ್ನ ಮನಸ ಕದ್ದ
ಚಿತ್ತ ಚೋರಿಯ
ಬಂಧಿಸಿಡುವೆನು
ಹೃದಯ ಗೂಡಿನ ಚಿಪ್ಪಿನೊಳಗೆ.
43 ಜಡೆ
-------------
ಮಾರುದ್ದವಿದ್ದರೂ
ಮಾರುವಂತಹುದಲ್ಲ.
44 ಕೋಪ
-------------
ಬೇಕಾದಾಗ ಬರದು
ವಿದ್ಯುತ್ ದೀಪದಂತೆ
ಬೇಡವಾದಾಗ ಬರುವುದು
ಕರೆಂಟ್ ಬಿಲ್ನಂತೆ.
45 ಚಳಿ
--------------
ಸೂಜಿ ಮದ್ದಿನಿಂದಲೂ
ಶಮನವಾಗದ್ದು
ಕಂಬಳಿ ಹೊದ್ದು ಮಲಗಿದಾಗ
ಶಯನವಾಗಿತ್ತು.
46 ಕೊಂಡಿದ್ದಲ್ಲ
----------------
ಹೊಸದೊಂದು
ಮನೆಯ ಮಾಡಿದೆ
ಇನಿಯಳ
ಹೃದಯ ಮಂಟಪದಲ್ಲಿ.
47 ಅದೃಷ್ಟ
------------
ಲೆಖ್ಖ ಬರದವರೂ
ರೊಕ್ಕ ಮಾಡುವರು
ಹೆಕ್ಕಿ ನೋಡಿದರೆ..........
ರೊಕ್ಕ ಮಾಡಲು ಹೋಗಿ
ಲೆಖ್ಖ ಬಂದವರೂ
ಸಿಕ್ಕಿ ಬೀಳುವರು.
48 ಮೂಗು
------------
ಚೋಟುದ್ದವಿದ್ದರೂ
ಬೆಳೆಯುವಂತಹುದಲ್ಲ.
49 ಪರಿವರ್ತನೆ
--------------
ಹರೆಯದಲಿ ಹೊತ್ತಿದ್ದ
ಸಂಸಾರ ಭಾರದ ಹೊರೆ
ಮುದಿತನದಲಿ ಆಗಿದ್ದ
ಮನೆ ಮಂದಿಗೆಲ್ಲಾ ಒಂದು 'ಹೊರೆ.
50 ಸಂಚು
-----------
ಕಣ್ಮನ ನಿಮಿರುವ ಕೋಲ್ಮಿಂಚು
ಅವಳುಟ್ಟ ಜರತಾರೀ ಅಂಚು
ಇದೆಲ್ಲ
ಎನ್ನ ಸೆಳೆಯುವ ಸಂಚು
ಎಂದರಿವಾಗುವುದರೊಳಗೆ
ವ್ಯಾಪಿಸಿಬಿಟ್ಟಿದ್ದೆ ಇಂಚಿಂಚೂ.
51 ಚಿರಂಜೀವಿ
----------------
ಸಾಲ ಮಾಡಿದವ
ಸಾಯಬಹುದು
ಸಾಲ ನೀಡಿದವ
ಸಾಯಬಹುದು
ಆದರೆ
ಎಂದಿಗೂ ಸಾಯದು
ಈ ಸಾಲ.
52 ಸಾಹಸ
------------
ಅವಳಿಗರಿಯದ ಹಾಗೆ
ಆರಾಧಿಸಿದೆ
ಇದಕಿಲ್ಲ ಆಧಾರ
ಅವಳಿಗರಿಯದ ಹಾಗೆ
ರೋಧಿಸಿದೆ
ಇದೂ ನಿರಾಧಾರ
ಅವಳಿಗರಿಯುವ ಹಾಗೆ
ಹಾಕಿದೆ
ಮೂರುದಾರವೆಂಬ ಮೂಗುದಾರ
ಇದಕ್ಕಿದೆ
ನಾವಿರಾರು ಜನರ ಆಧಾರ.
53 ದಂತ ಭಗ್ನಂ
---------------
ಬಾಯಿಗಿಟ್ಟ ಗುಂಡ
ಶತಗಟ್ಟಿಯೆಂದು
ಬದಿಗಿಟ್ಟ ಚಕ್ಕುಲಿಯೊಂದ
'ಕಟಂ'ಎಂಬ ಸದ್ದು ಬಾಯಿಯಿಂದ
ಮುರಿದದ್ದು ಚಕ್ಕುಲಿಯಾಗಿರಲಿಲ್ಲ
ಗುಂಡನ 'ದಂತ.'
54 ಆಪ್ಯತೆ
-----------
ನನ್ನ ಅವರ ಸಂಬಂಧ
ತೀರಾ ಸನಿಹದ್ದು
ಆದರದು ಹೆಸರಿಗಷ್ಟೇ
ಸೀಮಿತದ ಸರಹದ್ದು
ನಾನು ದ ರಾ ಕಂಠಿ
ಅವರು ದ ರಾ ಬೇಂದ್ರೆ.
55 ಬೇರು
----------
ಯಾರೋ ಬೆದರಿಸಿದರೂಂತ
ನೀನೇಕೆ ಬೆದರುವೆ
ಬೆಡಗಿ;
ನಿನ್ನ ನನ್ನ ಒಲವು
ಹೃದಯಾಂತರಾಳದಲ್ಲಿ
ಬೇರೂರಿರುವಾಗ.
56 ಅಸಾಧ್ಯವಾದದ್ದು
----------------
ಕಾರು ಬಾರ್ನಲ್ಲಿ ಕುಳಿತೇ
ಬರೆದೆನೊಂದು ಕಾದಂಬರಿ
ವಷರ್ಾನುಗಟ್ಟಲೆ ಯೋಚಿಸಿದರೂ
ಬರೆಯದಾದೆ
ಅದಕ್ಕೊಂದು ಪರಿವಿಡಿ.
57 ಹಾಟರ್್ಫೇಲ್
--------------
ಇಳಿ ವಯಸ್ಸಿನಲ್ಲಿ
ಇಡದಿರಿ
ಅಪರಿಮಿತ ವಿಶ್ವಾಸ
ಆರೋಗ್ಯದ ಬಗ್ಗೆ
ಹೃದಯದ ಒತದತಡದಿ
ನಿಂತೀತು
ಸ್ವಾಸೋಛ್ವಾಸದ ಬುಗ್ಗೆ.
58 ಹೆಣ್ಣಿಗೆ
--------------
ವರದಕ್ಷಿಣೆ
ವಿಛ್ಛೇಧನ
ಭ್ರೂಣಹತ್ಯೆೆ
ಮೂಢನಂಬಿಕೆ
ಕಾಡುತಿಹವು
ದೆವ್ವ
ಭೂತ
ಪಿಶಾಚಿ
ಬ್ರಹ್ಮರಾಕ್ಷಸರುಗಳಾಗಿ.
59 ನಿದ್ದೆ ಮಾತ್ರೆ ಲಭ್ಯ
------------------
ದುಗುಡ ದುಮ್ಮಾನ
ವಿರಹ ವೇದನೆಗಳನ್ನು
ದೂರೀಕರಿಸಲು
ನಮ್ಮಿಂದ ಮಾತ್ರ ಸಾಧ್ಯ.
60 ಮಹಾಕವಿಗಳು!
--------------
ವ್ಯಾಸ
ಬರೆದ ಮಹಾಭಾರತವನ್ನು
ತಿರುಚಿ ಮರುಚಿ
ಬರೆಯುವುದೇ ಇವರ
ಹವ್ಯಾಸ.
61 ಅಂದು
-----------
'ಅಡಿಕೆ ಯುಗ'
ದರ ಸತ್ತು ಹೆಚ್ಚಿತ್ತು
ಸಾಲದ ಕಂತು,
'ವೆನಿಲ್ಲಾ ಯುಗ'
ದರವೇನೋ ಬಂತು
ಆದರೆ ಹೆಚ್ಚಿತ್ತು
ಜೀವ ಭಯದ ಜಂತು.
62 ನಾ ಪಾಸು?
-------------
ನೋಡಿಕೊಂಡೇ ಬರೆದೆ
ಪರೀಕ್ಷೆಯಲ್ಲಿ
ಆಸುಪಾಸು,
ಆದರೂ ರಿಸಲ್ಟ ಮಾತ್ರ
ನಪಾಸು.
63 ಸಹಬಾಳ್ವೆ
------------
ಕೋಮು ಧ್ವೇಶದಕಿಡಿ
ಸುಟ್ಟೀತು ಊರನ್ನೇ ಇಡೀ
ಅದೇ ಕಿಡಿ
ಸ್ನೇಹ ಸೌಹಾರ್ಧವಾಗಿ ಬೆಳಗಿಸಿದರೆ......
ನಮ್ಮ ದೇಶಕ್ಕೇ ಸಿರಿ.
64 ಜಲ ಮಾಲಿನ್ಯ
---------------
ಪುಣ್ಯ ಕ್ಷೇತ್ರಗಳಲ್ಲಿ
ತೀರ್ಥ ಸ್ನಾನದ ಹರಕೆ
ಇದಾಗಿತ್ತು ನನ್ ಬಯಕೆ
ಪೂರೈಸಿದ ಬಳಿಕ
ಮೈಯೆಲ್ಲಾ ತುರಿಕೆ.
65 ಎಚ್ಚರಿಕೆ
------------
ನಲ್ಲೇ
ತಾಳಿ ಕಟ್ಟಲು
ಯಾರು ಬಂದರೂ
ಕೊಡದಿರು ಕತ್ತು,
ಕೊಟ್ಟರೆ
ನಮ್ಮ ಪ್ರೀತಿಗೆ ಬಂದೀತು
ಕುತ್ತು.
66 ರಾಮಕೃಷ್ಣ ಹೆಗಡೆ
----------------
ಈ ಧುರೀಣನ ನಿಧನಕ್ಕೆ
ಕಂಬನಿಗೈಯುತ್ತಿದ್ದರು
ಕಾಲೇಜಿನ ಆಸುಪಾಸು,
ಏಕೆಂದರೆ
ಆ ಮುತ್ಸಧ್ಧಿಯೇ
ಜಾರಿಗೆ ತಂದ ವ್ಯವಸ್ಥೆ
ಬಸ್ ಪಾಸ್.
67 ಮನವಿ
--------------
ಎನ್ನ
ಮನಸ ಕದ್ದ ಕಳ್ಳಿ
ಅದನ್ನ ಹಿಂತಿರುಗಿಸದಿರು
ಎಂಬುದೆನ್ನ ಕಳಕಳಿ.
68 ಸಾಗುವುದು
-------------
ಬರುವತನಕ
ಮರಣ
ಜೀವನದ
ಪಯಣ
69 ಸಾಹುಕಾರ
-------------
ಬಡತನಕೆ
ಸಾವು
ಬಂದಾಗ.
70 ಸದಾ ಓದು
-------------
ಜೀವಿತಾದ್ಯಂತ ನೀನಾಗಿರು
ಗ್ರಂಥಾಲಯ ಮಿತ್ರ,
ಇಲ್ಲದಿರೆ ನೀ
ಲಯ ಮಾತ್ರ.
71 ಕೊಂಡು ಓದಿ
-------------
ಓದಿನಲಿ ಅಭಿವ್ಯಕ್ತಿ
ಇರುವುದು ಸಹಜ
ಆದರದನು
ಕೊಂಡು ಓದುವವನೇ
ನಿಜ ಮನುಜ.
72 ಜ್ಞಾನವೃಧ್ಧಿಗೆ
------------
ಓದಿ ಓದಿ ಪುಸ್ತಕ
ತುಂಬಿಸಿ ಕೊಳ್ಳಿ ಜ್ಞಾನದಿಂದ
ನಿಮ್ಮಯ ಮಸ್ತಕ.
73 ಕಲಿ ಮಹಿಮೆ
--------------
ಕಲಿಗಾಲವೆಂದರೆ
ಕೆಲ ಜನರಿಗಾಗಾ
ಏಕೆಂದರೆ
ಕೆಲ ಜನರಿಗೆ ಯೋಗ
ಕೆಲ ಜನರಿಗೆ ಲಾಗಾ.
74 ಸಾಠಿ
---------
ಮದುವೆ ಮುಂಜಿ
ಸಭೆ ಸಮಾರಂಭಗಳಲ್ಲೆಲ್ಲಾ
ನೀನೇ ಸ್ವೀಟಿ
ಸ್ವೀಟಲ್ಲಿ ಇಲ್ಲಾ
ನಿನಗಾರೂ ಸರಿಸಾಟಿ.
75 ಹರೆಯ
-----------
ಹದಿ ಹರೆಯಕೆ
'ಬಯಕೆ'ಗಳೇ
ಹೊದಿಕೆ ತಡಿಕೆ ಎಲ್ಲಾ.
76 ಗಂಡಾಂತರ
-------------
ಗಂಡ ಹೆಂಡತಿಯರ
ನಡುವೆ ಇದ್ದರೆ
ಅಂತರ.
77 ಬದಲಾವಣೆ
-------------
ಮನಷ್ಯನ ವಯಸ್ಸು
ಬದಲಾದ ಹಾಗೇ
ಬದಲಾಗುತ್ತದೆ
ಮನಸ್ಸು,
ಜೊತೆಗೆ
ಕನಸೂ ಕೂಡ.
78 ಸಹಕಾರ
---------------
ಹೆಸರಲ್ಲಿ ಮಾತ್ರ 'ಕಾರ'
ಒಳಗಡೆ ಸಿಹಿಯಾದ ತತ್ವ
ಇದನ್ನರಿತು ಬಾಳಿದಲಿ
ನಾವಾಗುವೆವು
ಸಾಹುಕಾರ.
79 ನಿಜವೆ?
-----------
ಜೀವನ ಎಂಬುದು
ಬರೀ
ಅಂತೆ ಕಂತೆಗಳ
ಸಂತೆಯಂತೆ.
80 ಮಕ್ಕಳಿಗೆ
-----------
ಕಲಿಸಿದರೂ ಕಲಿಯದಿದ್ದರೆ
ಬದುಕು
ಹಿಡಕೊಂಡು ನಾಲ್ಕು
ತದುಕು,
81 ನಾ(ಲಾ)ಯಕ
---------------
ಪಕ್ಷದಿಂದ ಪಕ್ಷಕ್ಕೆ ನೆಗೆಯುವ
ನಾಯಕರು
ಅಧಿಕಾರಕ್ಕೆ ಬರಲು
ನಾಲಾಯಕರು.
82 ಕಾಖರ್ಾನೆ
--------------
ಅಂದು
ಚಳುವಳಿಗಾರರು
ಸ್ವಾತಂತ್ರ್ಯಯೋಧರಾಗಿ ಬಂದ
ಬಂಧೀಖಾನೆ,
ಇಂದು
ಪುಂಡ ಪೋಕರಿಗಳು
ರಾಜಕಾರಣಿಗಳಾಗಿ ಬದಲಾಗುವ
ಕಾಖರ್ಾನೆ.
83 ಎದೆಗಾರಿಕೆ
--------------
ತುತ್ತು ಇಕ್ಕವಳು
ಮುತ್ತು ನೀಡುವವಳು
ಪ್ರೀತಿಯಿಂದಿದ್ದರೆ
ಅಕ್ಕ ಪಕ್ಕ
ಕಷ್ಟವಾದರೂ ಎದುರಿಸಬಹುದು
ಈ ಬದುಕ.
84 ಎಚ್ಚರಿಕೆ
-------------
ಕಲಿಯಾಕಿಲ್ಲ ಸಾಲೀ ಗೀಲಿ
ಬೇಕಿಲ್ಲ ಕಟ್ಟುಪಾಡುಗಳ ಬೇಲಿ
ಆರಾಮಾಗಿರ್ತೀನಿ ಜಾಲಿ
ಎಂದವ ಕೊನೆಗೆ
ಮಾಡಿ ಬದುಕಬೇಕಾದೀತು
ಕೂಲಿ ನಾಲಿ.
85 ಬಯಕೆ
-----------
ಬಯಸಿದಷ್ಟೂ
ಬಹಳ
ಆಸೆಗಳ ಆಳ'
86 ಸತ್ಯ
---------
ಬದುಕಿನುದ್ದಗಲಕ್ಕೂ
ಆಡಿದ್ದೆಷ್ಟೋ ಆಟ
ಅಂತಿಮದಲ್ಲಿ ಮಾತ್ರ
ಆರಡಿ ಮೂರಡಿಯೇ
ದಿಟ.
87 ದೈವದೊಲವು
---------------
ಬೋರ್ಗರೆದುಕ್ಕುವ ಪ್ರವಾಹದಂತೆ
ಪ್ರತಿ ಮನುಷ್ಯನ ಮನಸ್ಸು
ಆಧ್ಯಾತ್ಮಿಕತೆಯತ್ತ ಒಲವು
ದೈವೀ ಶಕ್ತಿಯ ಬಲವು
ಇದ್ದರೆ ಬರುವುದು
ಪ್ರವಾಹ ಪ್ರತಿಬಂಧಿಸುವ ಛಲವು.
88 ಕನಸು
----------------
ಹಲವಾರು ಕನಸು ಬೀಳುವವು
ದಿನನಿತ್ಯ
ಅವುಗಳಲ್ಲೊಂದೂ
ಸತ್ಯ.
89 ಬದಲಾವಣೆ
------------
ಇದು ಕಲಿಗಾಲ
ಕುಲ ಕುಲ ಕುಲ
ಎನ್ನುವವನೇ
ಕೇವಲ.
90 ವ್ಯತ್ಯಾಸ
-------------
ಊಟ ಆಟೋಟಗಳನ್ನು
ಮಿತಗೊಳಿಸಿಕೊಂಡರೆ
ಆರೋಗ್ಯ,
ತೀರಾ ಕಡಿತಗೊಳಿಸಿದರೆ
ವೈರಾಗ್ಯ.
91 ಆಸೆ
----------
ನೀನೊಂದು ತೀರ
ನಾನೊಂದು ತೀರ
ಅಂತಿದ್ದ
ನಮ್ಮನ್ನು ಸೇರಿಸಿತ್ತು
ನಮ್ಮಾಸೆಗಳ ಮಹಾಪೂರ.
92 ಅಪರಾವತಾರ
---------------
ಮಡಿ ಮೈಲಿಗೆ
ಶುದ್ಧ ನಿಶುದ್ಧಗಳು
ಬುದ್ಧಿವಂತ ಜನರ
ಸಮಯಕ್ಕೆ ಸ್ಪಂದಿಸುವ
ಅಪರಾವತಾರಗಳು.
93 ಚಂಚಲೆ
-----------
ಕಣ್ಣಂಚಿನಲ್ಲಿಯೇ
ಸಂಚು
ಮಾಡುವವಳು.
94 ಜೀವಂತ ರಂಬೆ
------------------
ಕೊಂಡಿದ್ದಲ್ಲ, ಕದ್ದಿದ್ದಲ್ಲ
ದಕ್ಕಿದ್ದಲ್ಲ, ಮಿಕ್ಕಿದ್ದಲ್ಲ
ಆದರೂ ಆಗೊಂಬೆ
ಯನ್ನ ಸ್ವಂತದ್ದೆಂಬೆ.
95 ವಾಸ್ತವ
-----------
ದೇಶದಲ್ಲೆಲ್ಲ ಬರ
ಸಾಲ ಬಲು ಭಾರ
ಅಡವಿಟ್ಟಾದರೂ ಸರ
ತುಂಬಲೇಬೇಕಲ್ಲ ಕರ.
96 ನೀರಿನ ವಿಧ
---------------
ಕೆರೆ ನೀರು
ಮನೆಯಲ್ಲಿದ್ದು
ವ್ಯವಸಾಯ ಮಾಡಿಕೊಂಡಿರುವವ,
ಹೋಳೆ ನೀರು
ಊರಿಂದೂರಿಗೆ
ವರ್ಗವಾಗಿ ಸಂಚರಿಸುತ್ತಲಿರುವ
ಸಕರ್ಾರಿ ನೌಕರ,
ಸಮುದ್ರ ನೀರು
ಇಡೀ ಇಂಡಿಯಾವನ್ನೇ
ವ್ಯಾಪಿಸಿರುವ
ಬ್ರಷ್ಠಾಚಾರ ಪೀಡಿತ
ರಾಜಕಾರಣಿಗಳು.
97 ಕಿವಿಮಾತು
------------
ಮುಂಜಾನೆ
ಮನೆಮಂದಿಯನ್ನು
ತಟ್ಟಿ ತಟ್ಟೀ ಎಬ್ಬಿಸಿ,
ಇಲ್ಲದಿರೆ
ಆರಿಹೋದೀತು
ಬೆಡ್ ಕಾಫಿ ಬಿಸಿ.
98 ಹಠ
------------
ಬೆಳ್ಳಗಿನ ಮೈಬಣ್ಣದ
ಹುಡುಗಿಯೇ ಬೇಕೆಂದು
ಆಸೆ ಪಟ್ಟ ವರ ಮಹಾಶಯನಿಗೆ
ಕೊನೆಗೆ ದಕ್ಕಿದ್ದು
ಬಳಿ ಹುಡುಗಿಯಲ್ಲ
ಬಿಳಿ ಕೂದಲಿನ ಹುಡುಗಿ.
99 ವಿಪಯರ್ಾಸ
---------------
ಅಂತರಿಕ್ಷಯಾನ
ಮಾಡಿಯೇ ತೀರಬೇಕೆಂದು
ಕನಸ ಹೊತ್ತಿದ್ದನೊಬ್ಬ
ಪುಣ್ಯಾತ್ಮ,
ಆದರೆ ದುರಂತವೊಂದರಿಂದ
ಅಂತರಿಕ್ಷಕ್ಕೇ ನೆಗೆದಿತ್ತು
ಅವನಾತ್ಮ.
100 ಅಜ್ಜಿಯ ಅಡಿಗೆ
----------------
ಮನೆಯ ಹಿತ್ತಲಿನಲ್ಲಿಯೇ
ಮಾಡಿ ಹಾಕಿದಳು ನನ್ನಜ್ಜಿ
ಮೂರ್ಹೊತ್ತೂ ಬದನೇಕಾಯಿ ಬಜ್ಜಿ
ಈಗ ಮನೆ ಜನರಿಗೆಲ್ಲಾ
ಮೈ ತುಂಬಾ ಕಜ್ಜಿ.
101 ವಿಂಗಡನೆ
--------------------
ಚನ್ನಾಗಿ ಮೂಡಿ ಬಂದಲ್ಲಿ
ಸಚಿತ್ರ ವರದಿ
ಚಿತ್ರ ಅಸ್ಪಷ್ಟವಾಗಿದ್ದಲ್ಲಿ
ವಿಚಿತ್ರ ವರದಿ
ಎಲ್ಲಾ ತಪ್ಪಿದರೆ
ಸೀದಾ ರದ್ದಿ.
102 ಅ_ ಬಾವ
---------------------
ಮಾವನ ಮನೆ ಮಂದಿಗೆ
ಆ ಊರ ಜನಕೆಲ್ಲ
ನಾನಾದೆ ಬಾವ
ನನಗೆ ಮಾತ್ರ
ಬಾವನದೇ ಅಭಾವ.
103 ವೇಶ್ಯೇ
-----------------
ಕಟ್ಟೋದಿಲ್ಲ
ಅವಳ್ಯಾರಿಗೂ ರಾಖಿ
ಏಕೆಂದರೆ
ತಪ್ಪಿ ಹೋಗುತ್ತದಲ್ಲ
ಗಿರಾಕಿ.
104 ಕೊಳೆರಾಯ
--------------------
ಹೊಯ್ಯೋ ಹೊಯ್ಯೋ ಮಳೆರಾಯಾ
ಎಂದು ಒದರುವುದೇಕೆ?
ನಿಮ್ಮ ಕರೆಗೆ ಓಗೊಟ್ಟು
ಭಾರೀ ಮಳೆ ಸುರಿದರೆ
ಅಡಿಕೆ ಮರಗಳಿಗೆ
ಕೊಳೆರಾಯ ಗಂಟು ಬಿದ್ದಾನು
ಜೋಕೆ.
105 ಆಳು ಗೋಳು
-------------------
ಆಳು ಮಾಡಿದ್ದು ಹಾಳು
ಇದು ಬಹಳ ಹಳೆಯ ಗಾದೆ ಕೇಳು
ಈಗ ಆಳಿಲ್ಲದವನ ಬಾಳು
ಗಾಢಾಂಧಕಾರದ ಬೀಳು.
106 ದಂಪತಿಗಳಲ್ಲಿ
್ಟ---------------------
ವಿಫುಲವಾಗಿದ್ದರೆ
ಪ್ರೀತಿಯ ಒರತೆ
ಬೇರೇನೂ ಬಾಧಿಸಲಾರದು
ಕುಂದು ಕೊರತೆ.
107 ಗಿಡ ನೆಡಿ
---------------------
ಕಷ್ಟವಾದರೂ ಸರಿ
ಊರಿರಿ
ಪುಟ್ಟದೊಂದು ಸಸಿ
ಮುಂದೊಂದು ದಿನ
ಗಿಡವಾಗಿ, ಮರವಾಗಿ
ಹೂವು ಹಣ್ಣು ಕಾಯಿ ಬಿಟ್ಟಾಗ
ತಡೆಯಲಾಗದು ಖುಷಿ.
108 ಕೆಟ್ಟ ಬಳಿಕ ಬಂದ ಬುದ್ಧಿ
-----------------------
ಬಹಿರಂಗದ ಸೌಂದರ್ಯಕೆ
ಮನಸೋತು
ಅವಳಿಗೆ ಮಾರು ಹೋದೆ
ಅಂತರಂಗದ ಒಳತಿರುಳ
ಕಲ್ಮಶ ಕಂಡಾಗ
ಮಾರು ದೂರ ಬಂದೆ.
109 ನಾಯಿಕೊಡೆಗಳಂತೆ
---------------------
ಕನಸುಗಳು
ಚಿಗುರುತ್ತವೆ
ಮತ್ತೆ ಮತ್ತೆ ಕಮರುತ್ತವೆ
ಮತ್ತೆ ಮರುಕಳಿಸುತ್ತವೆ.
110 ಸತಿಪತಿಗಳೇ
-----------------
ಮಾಡದೆಯೇ ಅಪಹಾಸ್ಯ
ಮಾತನಾಡುತ್ತ ಹಾಸ್ಯ
ಕೆಡಿಕೊಳ್ಳದೆ ಸ್ವಾಸ್ಥ್ಯ
ಹಂಚಿಕೊಂಡರೆ ಸ್ವಾರಸ್ಯ
ಜೀವನದಿ ಮೂಡುವುದು
ಸಾಮರಸ್ಯ.
111 ಬಲ್ಲೆಯಾ?
--------------------
ಪ್ರೀಯೇ
ಪುನಃ ಪುನಃ
ಹೋಟೆಲ್ಲು ಸಿನೇಮ ಪಾಕರ್ುಗಳನ್ನು
ಅಲೆದಾಡಿಸುವಲ್ಲಿ ನಾನಾಗಿರಬಹುದು
ಜಿಪುಣ,
ಆದರೆ ಪ್ರೀತಿಯ
ಮಹಾಪೂರ ಹರಿಸುವಲ್ಲಿ
ಮಾತ್ರ ನಾ ನಿಪುಣ.
112 ಭಗ್ನ ಪ್ರೇಮಿ
------------------
ಅವ ಬಳಲಿ ಬೆಂಡಾದ
ವಿರಹದಿ,
ಏಕೆಂದರೆ ನೋಡಿದ್ದ ಪತ್ರಿಕೆಯಲ್ಲಿ
ನಲ್ಲೆಯ ವಿವಾಹದ
ವರದಿ.
113 ಅಜೀರ್ಣ
-------------------
ಹಲಸಿನ ಸೊಳೆ ಹಳಸುತ್ತದೆ
ಎಂದು ಮಾಡಿ ಹಾಕಿದಳೆನ್ನಾಕೆ
ಸೆಳೆಯದೇ ಹುಳಿ ಸಾರು ಪಲ್ಲೆ ಬಜ್ಜಿ,
ಈಗದನ ತಿಂದ ಬಳಿಕ
ಹೊಟ್ಟೆಯೆಲ್ಲಾ ತೊಳಸುತ್ತದೆ.
114 ಬೇಸಿಗೆಯಲ್ಲಿ
--------------------
ಜೋಗದ ಗುಂಡಿಯ
ಕಂಡೆ,
ಅಲ್ಲಿರುವುದು ಬರೀ ರಾಶಿ
ಕಲ್ಲುಗಳ ಬಂಡೆ.
115 ಸಾಹಸಿ
----------------
ಸಾಲು ಮರದ ತಿಮ್ಮಕ್ಕನ ಹೆಸರು
ಸದಾ ಅಮರ,
ಏಕೆಂದರೆ
ಅವಳೇ ಸ್ವತಃ ನೆಟ್ಟು ಬೆಳೆಸಿದ್ದಳು
ಸಾಲು ಮರ.
116 ದಂತ ಭಗ್ನ
-------------------
ಹುಡುಗಿಯೊಬ್ಬಳು
ಉದುರಿಸಿದ್ದಳು
ಅವನ ದಂತ,
ಹಾಗಾಗಿ ಆ ಪೋಲಿ ಛೇಡಿಸಿದ್ದು
ಅದೇ ಅಂತಿಮ ಹಂತ.
117 ಮರೆವು
----------------
ರಮಿಸುವುದರಲ್ಲಿಯೇ
ನಿರತರಾದ
ಸತಿ ಪತಿಗಳು,
ವಿರಮಿಸುವುದ ಮರೆತರು.
118 ವಿಪಯರ್ಾಸ
--------------------
ಸಕರ್ಾರಕ್ಕೇನೋ
ಅಧಿಕ ಆದಾಯ ತರುವುದು
ಅಬಕಾರಿ,
ಆದರೆ ಇದೇ
ಬಡ ಜನರನ್ನು ಆಗಿಸುತ್ತದೆ
ಭಿಕಾರಿ.
119 ಯೌವನದಲ್ಲಿ
------------------
ಪ್ರೀತಿ ಪ್ರೇಮದ ಹಸಿವು
ಹುಲ್ಲು ಮೇಯ್ದಂತೆ ಹಸುವು
ಇವಕೆ
ಕನಸುಗಳೇ ಕಸುವು.
120 ಶಿಕ್ಷಣ
--------------
ದಡ್ಡ ಮಕ್ಕಳನು
ತಿದ್ದಿ ತೀಡಿ, ಶಿಕ್ಷೆಗೆ ಒಳಪಡಿಸಿ
ಕಲಿಸುವುದು ಶಿಕ್ಷಣ,
ಅದುವೇ ಶಿಕ್ಷಕರ
ಲಕ್ಷಣ.
121 ವ್ಯತ್ಯಾಸ
------------------
ಸ್ವಾತಂತ್ರ್ಯ ಸಂಗ್ರಾಮದಲ್ಲಿ
ಜೀವತೆತ್ತವರು
ಹುತಾತ್ಮರು,
ಅನೈತಿಕ ಚಟುವಟಿಕೆಗಳಲಿ
ಸತ್ತವರು
ದುರಾತ್ಮರು.
122 ತಪರಾಕಿ
---------------
ಪ್ರಿಯಕರನೇ
ಕಟ್ಟಲು ಬಂದಿದ್ದ
ಅವಳಿಗೆ ರಾಖಿ.
ಕೋಪದಿಂದ ಕೊಟ್ಟಳವಗೆ
ತಪರಾಕಿ.
123 ಮುಂಜಾಗ್ರತೆ
----------------------
ಹೊಡೆಯುವ ಮೊದಲು
ಪಟಾಕಿ,
ತುಂಬಿಕೊಂಡಿದೆಯೋ ಇಲ್ಲವೋ
ಮನೆಯ ನೀರಿನ ಟಾಕಿ.
124 ಆಘಾತ
----------------
ಸಂತೋಷದಿ ವರಿಸಿದೆ
ಸಂಗೀತ ಕಲಿತ ಸಂಗಾತಿಯ
"ಸಂಗೀತದ ಖ್ಯಾತಿಯೇ ನನ್ನ ಸಂತತಿ"
ಎಂದು ಸತಿ
ಸತ್ಯ ಸಂಗತಿ
ತಿಳಿಸಿದಾಗ
ಭರಿಸಲಾಗದ ಘಾತಿ,
125 ಹೋರಾಟ
----------------
ಸತಿ ಪತಿಗಳಿಬ್ಬರೂ
ಅಪ್ರತಿಮ ಹೋರಾಟಗಾರರು
ಅವನ ಹೋರಾಟ
ಕನ್ನಡಕ್ಕಾಗಿ.
ಅವಳು ಹಾರಾಡುವುದು
ಕನ್ನಡಿಗಾಗಿ,
126 ..................ದೊಣ್ಣೆಗೆ ನಿಮಿಷ
------------------------
ಆಡದ ಮಗುವಿಗೇಕೆ
ಆಟಿಕೆ?
ಹಾಳುಗೆಡವೀತು
ಹೊಡೆಯುವುದರೊಳಗಾಗಿ
ಚಿಟಿಕೆ.
127 ದರ ಏರಿಕೆ
------------------
ಸ್ವಲ್ಪವೂ ಇಲ್ಲ
ಖರೀದಿಸುವ ಖಯಾಲಿ,
ಏಕೆಂದರೆ
ಜೇಬೆಲ್ಲ ಖಾಲಿ ಖಾಲಿ.
128 ಧನಿಕ
----------------
ಆಧುನಿಕ ಉಪಕರಣಗಳಿಗೆ
ಮಾರು ಹೋಗುವವ.
129 ಎದೆ ಹಾಲು
----------------------
ಮಗು
ಹೇಗೆ ಆದೀತು
ಮೃತ?
ತಪ್ಪದೇ ಕುಡಿಸಿದರೆ
ಅಮೃತ.
129 ಕನ್ನಡದ ಕಲಿ
----------------------
ದುಡಿದುಣ್ಣುವ ದಿನಗೂಲೀ
ಎಂದೆನ್ನುವೆಯೇಕೆ
ತಲೆಯೆಲ್ಲಾ ಖಾಲಿ?
ಕಲಿತರೆ ನೀ ಸಾಲಿ
ನೀನೊಬ್ಬ ಕನ್ನಡದ ಕಲಿ.

130 ಪರಿವರ್ತನೆ
-----------------
ಚುನಾವಣೆಯ ವೇಳೆ
ಕಿರುದನಿಯಲಿ ಪಿಸುಗುಟ್ಟಿದರೂ
ಕೇಳುವುದು
ಬಡವರ ಕೂಗು,
ಆರಿಸಿ ಬಂದ ನಂತರ
ಆರ್ತನಾದದಿ
ಮಾರ್ದನಿ ಮೊಳಗಿಸಿದರೂ
ಕೇಳದು 'ಹೋಗು'

131 ಕೊನೆಗುಳಿವುದು
---------------------
ಮೃತನ ಹಿಂಬಾಲಿಸುವ
ಜನ ಸಮೂಹ
ಚಿತಾಗಾರದವರೆಗೆ ಮಿತ್ರ,
ನಂತರ ಹಿಂಬಾಲಿಸುವುದು
ಪಾಪ ಪುಣ್ಯಗಳ ಕಡತಗಳು
ಮಾತ್ರ.

132 ಎಚ್ಚರಿಕೆ
------------------
ಜಮೀನು ಜಾಮೀನು ಇರುವಾಗ
ಮಾಡಲೇನು ಅಡ್ಡಿ?
ಎಂದುಕೊಂಡು
ಕಂಡ ಕಂಡಲ್ಲಿ
ಮಾಡಿದರೆ ಸಾಲ,
ಹರಿದುಕೊಂಡರೂ ಚಡ್ಡಿ
ತೀರಿಸಲಾಗದು
ಬಡ್ಡಿ ಚಕ್ರಬಡ್ಡಿ.

133 ಸಹಿ ಕಹಿ
-----------------
ಮುಂದದು
ನುಂಗಲಾರದ ಕಹಿ,
ಸಾಲಗಾರನ ಮಾತಿಗೆ
ಮರುಳಾಗಿ ಹಾಕಿದರೆ
ಜಾಮೀನಿನ ಸಹಿ.

134 ಒತ್ತು
------------------
ನಾನೋ ಕೊಟ್ಟೆ
ಅಧರದ ಸಿಹಿ ಮುತ್ತಿಗೆ,
ಆದರವಳು ಮಾತ್ರ
ಭಾರೀ ವೆಚ್ಚದ
ಹವಳದ ಮುತ್ತಿಗೇ
ಕೊಟ್ಟಳು.

135 ಖಾಲೀ ಅಂಬರ
---------------------
ಮೋಡಗಳು ಮನೆ ಮಾಡಿರದ
ಅಂಬರ,
ಭೂ ಜಲಚರಗಳಿಗೆ
ತಪ್ಪದ ಬರ.

136 ಇರುಳಿನಲ್ಲಿ
------------------
ನನ್ನವಳ
ಕೋರಿಕೆ ಹಾಗೂ ಕನವರಿಕೆ
ಜೊತೆಗೆ ಡರ್..........ಎನ್ನುವ ಗೊರಕೆ
ನನಗೆ ನಿದ್ದೆಯಾಯಿತು
್ತಮರೀಚಿಕೆ.

137 ನೀರಾ ವ್ಹರಿ
----------------
ವ್ಯವಸಾಯಕೆ
ಇಲ್ಲದಿದ್ರೂ ಪರವಾಗಿಲ್ಲ
ನೀರಾವರಿ,
'ನೀರಾ' ಒಂದಿದ್ದರೆ ಸಾಕು,
ಮಾಡಿಕೊಳ್ಳುವುದಿಲ್ಲ ವ್ಹರಿ.

138 ಶಾಸಕ ಸಂಸದರಿಗೆ
-----------------------
ಬೆಣ್ಣೆಯಲ್ಲಿನ ಕೂದಲು ತೆಗೆದಂತೆ
ನಯವಾಗಿ ಮಾತನ್ನಾಡಿ
ಸಂದಿಗ್ಧತೆಯಲ್ಲೂ ನುಣುಚಿಕೊಳ್ಳುವ
ಹುನ್ನಾರ,
ಇಂತವರ ಸ್ವಾಗತೆಕ್ಕೇಕೋ
ತುರಾಯಿ ಹಾರ?

139 (ಸ)ಸುತ್ತೋಲೆ
-----------------------
ಜನಪ್ರತಿನಿಧಿಗಳಿಗೆ
ನಾಗರಿಕರು ಕೊಡುವರು
ಆಗಬೇಕಾದ ಕೆಲಸಕಾರ್ಯಗಳ
ಸುತ್ತೋಲೆ,
ಈಡೇರಿಸದಿದ್ದಲ್ಲಿ
ಅವು ಸತ್ತೋಲೆ.

140 ಹವ್ಯಕ ಜನತೆ
-------------------
ಮಾನ ಮಯರ್ಾದೆಗೆ ಮಾನ್ಯತೆ
ಸಹಕಾರದಲ್ಲಿ ಸಮನ್ವಯತೆ
ಅಧಿಕಾರದಲ್ಲಿ ನೈಪುಣ್ಯತೆ
ಐಶ್ವರ್ಯದಲ್ಲಿ ಸ್ವಾಯತ್ತತೆ
ದಾನ ಧರ್ಮ ದಯೆಯಲ್ಲಿ ಪ್ರಾಧಾನ್ಯತೆ
ಅಳವಡಿಸಿಕೊಂಡಿರುವ
ಇದೇ ಹವ್ಯಕ ಜನತೆ.

141 ರೈತರು
-------------------
ದುಡಿಮೆಯ ಸಾಮಥ್ರ್ಯ
ಉತ್ಪನ್ನದ ಮಿತಿ
ಮೀರಿ
ದೊಡ್ಡ ಸಾಲದ ಮೊತ್ತಕ್ಕೆ
ಹಾಕಿದರೆ ಗುನ್ನ,
ಸಾಇದ ಬಡ್ಡಿ ಚಕ್ರ ಬಡ್ಡಿ ಸೇರಿ
ಕುತ್ತಿಗೆ ಮಟ ಬಂದಾಗ
ಬೊಬ್ಬೆ ಹೊಡೆವರು ರೈತರು
ಮಾಡಿರೆಂದು
ಸಾಲಾ ಮನ್ನಾ.

142 ಬೀಗ
---------------
ಲಕ್ಷ ರುಪಾಯಿ
ವರದಕ್ಷಿಣೆ ಬಾಬ್ತು ಕೇಳಿದ್ದ
ಬಾವೀ ಬೀಗ,
ವಧುವು ತಾನು
ಪೊಲೀಸ್ ಅಧಿಕಾರಿಣಿಯೆಂದಾಗ
ಬಾವೀ ಬೀಗರ ಬಾಯಿಗೆ
ಬಿದ್ದಿತಾಗ ಬೀಗ.

143 ನಿಜವಾದ ಸಿರಿ
------------------
ನಿಮಗೊಲಿಯಬೇಕೇ
ಹರಿ?
ಆಧ್ಯಾತ್ಮ ಚಿಂತನೆಗಳ
ರೂಡಿಸಿರಿ,
ದಕ್ಕುವುದಾಗ
ನೆಮ್ಮದಿ ಮನಶಾಂತಿಯೆಂಬ
ಸಿರಿ,
ಜೊತೆಗೆ ಹರಿ.

144 ಮರೀಚಿಕೆ
---------------------
ಅವಳು
ನಿದ್ರಿಸಿದರೆ ಗೊರಕೆ,
ಎಬ್ಬಿಸಿದೆನಾದರೆ
ಪೊರಕೆ ಬಡಿತದ ಹೆದರಿಕೆ,
ಹೀಗಾಗಿ
ಮುದುಡಿ ಕಮರಿ ಹೋಗುತ್ತಿದೆ
ನನ್ನೆಲ್ಲಾ ಬಯಕೆ
ಈಗ ಬರೀ ಕನವರಿಕೆ.

145 ದುಂಬಿ
-----------------
ಅವು ಮಧುವನ್ನು
ಸಂಗ್ರಹಿಸಿಟ್ಟಿರುವುದ
ನಂಬಿ,
ಕಿಟ್ಟಿದರೆ ಹಬ್ಬಿಸಿಬಿಟ್ಟಾವು
ದೊಂಬಿ.

146 ಕಾಗರ್ಿಲ್ ಕದನ
-------------------------
ಕೇಳಿ ಬರುತ್ತಲಿದೆ
ಮದ್ದು ಗುಂಡುಗಳ
ಸುರಿಮಳೆಯ ಸದ್ದು,
ಏಕೆಂದರೆ
ಅದು ನಮ್ಮ ದೇಶದ
ಸರಹದ್ದು.

147 ಇದು ಗೊತ್ತಾ?
-------------------
ಇರುಳಿನಲ್ಲಿ
ಕಿವಿಯ ಬಳಿ ಬಂದು
ಗುಯ್ ಎಂದು ಹಾಡುವ
ಸೊಳ್ಳೆಗೆ
ನಾವೇ ಶ್ರೋತ್ರುಗಳು,
ಸೊಳ್ಳೆರಾಗದಿ ನಿದ್ರಾಭಂಗ ಪಡಿಸಿದವೇ
ನಮಗಾಗ ಶತ್ರುಗಳು.

148 ಸಲೀಸು
-------------------
ಕುಡತೆ ನೀರ
ಗುಟುಕರಿಸಿದಂತೆ
ಕವಿಗೆ
ಚುಟುಕು ಬರೆಯುವುದು.

149 ಸಾಮಿಪ್ಯತೆ
--------------------
ಧರ್ಮ ಕರ್ಮ ಮರ್ಮದೊಳು
ಪ್ರವೇಶಿಸಿದರೆ
ರಾಜಕಾರಣ,
ಸುಂದರ ಪರಿಸರದೊಳ್
ಪಸರಿಸಿದಂತೆ
ವಿಷ ವಿಕೀರಣ.

150 ವಾಸ್ತವಿಕತೆ
--------------------
ವಿವಾಹ ಬಂಧನ
ಗಂಡು ಹೆಣ್ಣು
ಒಬ್ಬರಿಗೊಬ್ಬರು ಆಗಲೆಂದು
ಆಸರೆ,
ಆದರೀಗ ಆಗುತಿಹ ಗಂಡು
ಹೆಣ್ಣಿನ ಕೈಸೆರೆ.


151 ಚಿರಂಜೀವಿ
-------------------
ಜನನವಿದೆ
ೆಮರಣವಿಲ್ಲ
ಕವಿ ಗೀಚಿದ ಕವಿತೆಗೆ,
ಸಾವಿದೆ ಕವಿಗೆ
ಸಾವಿಲ್ಲ ಕವಿತೆಗೆ.

152 ಬರ
---------------
ಮುಂಗಾರು ಮಳೆಯ ಮೇಲೆ
ಕವಿತೆ ಬರೆಯ ಹೊರಟೆ,
ಸ್ಪೂತರ್ಿಯೇ ಇಲ್ಲಾ
ಕಾರಣ
ಮಳೆಯೇ ಇರಲಿಲ್ಲ.

153 ಎಚ್ಚರಿಕೆ
---------------
ಕಪ್ಪೆ
ನಿರುಪದ್ರವಿಯೆಂದು
ಧೈರ್ಯದಿಂದ ಹೆಜ್ಜೆ ಇಡಬೇಡಿ,
ಮರೆಯಲ್ಲಿ
ಕಪ್ಪೆಯನ್ನು ನುಂಗಲು ಬಂದ
ಹಾವಿರಬಹುದು.

154 ಹೆಣ್ಣಿಗೆ
----------------
ವಾಂತಿ ಬಂದರೆ
ಶಾಂತಿಯಿಲ್ಲ.

155 ಕಾಮರ್ಿಕರು
------------------
ಬೇಸಿಗೆಯಲ್ಲಿ
ಹೆಚ್ಚು ನೀರು ಕುಡಿಯುತ್ತಾರೆ
ಆದರೂ
ಮೂತ್ರ ಬಾಧೆ ಕಡಿಮೆ ಇರುತ್ತದೆ,
ಮಳೆಗಾಲದಲ್ಲಿ
ನೀರು ಕುಡಿಯದಿದ್ದರೂ
ಒಪ್ಪತ್ತಿಗೆ ಹತ್ತಾರು ಬಾರಿ
ಮೂತ್ರಖಾನೆಗೆ ಹೋಗುವರು.

156 ಮುಂಗಾರು ಮಳೆ
------------------------
ರಣ ಬೇಸಿಗೆಯ
'ಬರ'ದ ಬೇಗೆಯಲ್ಲಿ
ಬಸವಿಳಿದ ರೈತರ ಮನಕೆ
ಹೊಂಗನಸ ಬಿತ್ತುವುದು.

157 ಸಾಲುಮರ ಮತ್ತು ರಸ್ತೆ
-------------------------
ರಸ್ತೆ ಅಂಚಿಗೆ
ಗಿಡ ನೆಟ್ಟು ಬೆಳೆಸಿದರೆ
ಮುಂದದು ಮರವಾಗಿ
ದಾರಿ ಹೋಕರಿಗೆ ನೆರಳು ನೀಡುತ್ತದೆ,
ಜೊತೆಗೆ
ಹೂವು ಕಾಯಿ ಹಣ್ಣುಗಳನ್ನೂ ನೀಡಬಹುದು,
ಆದರೆ
ಮರದಿಂದ ಬೀಳುವ
ನೀರಿನ ಹನಿಯಿಂದಾಗಿ
ರಸ್ತೆ ಮಾತ್ರ ನಾಮಾವಶೇಷಗೊಳ್ಳುತ್ತದೆ.

158 ಕವಿತೆ
------------------------
ಸಾಹಿತ್ಯೋಧ್ಯಾನದಲ್ಲಿ
ಬಾಡದ ಹೂವು
ಕವಿ ರಚಿಸಿದ ಕವಿತೆ,
ಅಲ್ಲಿ ಚಿಗುರಿನಿಂತ
ಗಿಡಗಳೇ ಕವಿಗಳು.

159 ನಾಚಿಕೆ
-----------------
ಹೆಣ್ಣಿಗೆ
ಉಸಿರಿರುವವರೆಗೂ
ಉರುಳದ ಪೇಟ.

160 ತದ್ವಿರುದ್ಧ
-----------------
ಅಂದು
ಕೆಲಸದ ವೇಳೆ
ಕೂಲಿಯ ಬೆವರಿಳಿಯುತ್ತಿತ್ತು,
ಇಂದು
ಕೂಲಿ ಕೊಡುವವನದೇ
ಬೆವರಿಳಿಯುತ್ತದೆ.

161 ಬೇ- ಸರ
-----------------
ನನಗ್ಯಾಕೋ
ಅವನ ಮೇಲೆ ಬಲು
ಬೇಸರ,
ನಾ ಮಾಡಿ ಹಾಕಿದ್ದನ್ನು
ಮೂರ್ಹೊತ್ತೂ
ಸುರಿಯುತ್ತಾನೆ
ಸರಪರ,
ಆದರೆ ನಾನು ಕೇಳಿದ್ದ
ಒಂದೇ ಒಂದು
ಚಿನ್ನದ ಸರ
ಕೊಡಿಸಲಿಲ್ಲ
ಅದೇ ಬೇಸರ.

162 ಆಶಾಜೀವಿ
------------------
ಸ್ವಾಥರ್ಿಯ ಮನಸ್ಸು
ಕುದಿಯುವ ಕುಲುಮೆ
ಆಶಾಜೀವಿಯ ಮನಸ್ಸು
ಚಿಮ್ಮುವ ಚಿಲುಮೆ.

163 ಜೋಕೆ
----------------
ಸಿಗರೇಟು ಬೀಡಿ
ಸೇವನೆಯಿಂದ
ಹೊಗೆ ಬರುತ್ತದೆ
ಮಜಾ ಸಿಗುತ್ತದೆ
ಜೊತೆಗೆ
ದಮ್ಮು ಕೆಮ್ಮೂ ಕ್ಯಾನ್ಸರೂ
ಬರುತ್ತದೆ.

164 ಕಿವುಡಿ
-----------------
ನನ್ನ ನಿರರ್ಗಳ
ಪ್ರೇಮ ಸಲ್ಲಾಪ
ನಿರಂತರ ಸಾಗಿದರೂ
ಆಕೆಗೆ ನೀರಸವಿನಿಸಲಿಲ್ಲ
ಅತಿಯಾದ
ಮಧುರ ಮಾತ್ಗಳ ಆಲಿಕೆಯಿಂದ
ಆಕಳಿಸಲಿಲ್ಲ
ಆಕೆ ಕಿವುಡಿ ಎಂಬ ವಿಚಾರ
ಮೊದಲಿಗೇಕೆ ಹೇಳಲಿಲ್ಲ
ಪ್ರೀತಿ
ಬಹುಕಾಲ ಬಾಳಲಿಲ್ಲ.

165 ಬಂಧನ
-----------------
ಮೇಲೆಂದರೆ ಆಕಾಶದಲ್ಲಲ್ಲ
ಕೆಳಗೆಂದರೆ ಪಾತಾಳದಲ್ಲಲ್ಲ
ಮಧ್ಯದ ಭೂಮಿಯ ಮೇಲೂ ಅಲ್ಲ
ಆಕೆಯ ಇರುವಿಕೆ
ಎನ್ನ ಹೃದಯ ಮಂದಿರದ
ಗೂಡಿನ ಚಿಪ್ಪೊಳಗೆ
ಬೆಚ್ಚಗೆ ಬಂಧಿಯಾಗಿದ್ದಾಳೆ.

166 ಧಾರಾವಾಹಿ
------------------
ಗಾಳೀ ಪಟ
ಹಾರಿದ ಹಾಗೇ
ನೂಲು ಜೋಡಿಸುವ
ದಾರದ ಉಂಡೆಯಂತೆ.

167 ಬೀಡಿ ಬಿಡಿ
-----------------
ಗುರುವೆಂದ
ದುವ್ರ್ಯಸನಗಳ ಬಿಡಿ,
ಶಿಷ್ಯ ಎಲ್ಲಾ ಬಿಟ್ಟು
ಬೀಡಿ
ರೂಢಿಸಿಕೊಂಡ.

168 ಆಸೆಗಳು
-------------------
ತಳವಿಲ್ಲದ ಬಾವಿಯಲ್ಲಿ
ತಾವಾಗಿಯೇ ತುಂಬಿ ಕೊಂಡಿವೆ
ಆಳದಲ್ಲಿ ಅವಿತುಕೊಂಡಿವೆ
ಕಣಕಣದಲ್ಲೂ ಬೆರೆತು ಹೋಗಿದೆ
ನರನಾಡಿಗಳಲೂ ಕಲೆತು ಹೋಗಿವೆ.

169 ಕಲಬೆರಿಕೆ
------------------
ವಿಷ ಕುಡಿದರೆ
ನಾವು ಸಾಯೋದಿರಲಿ
ಹೊಟ್ಟೆಯೊಳಗಿನ
ಜಂತೂ ಸಾಯಲಿಕ್ಕಿಲ್ಲ.

170 ಭಾವನೆ
----------------
ಆತ ಅಪರಾಧಿಯಲ್ಲ
ಅಮಾಯಕನೆಂಬುದು
ನನ್ನ ಭಾವನೆ'
ಏಕೆಂದರೆ
ಆತ ನನ್ನ
ಖಾಸಾ 'ಭಾವ'ನೇ

171 ಸ್ಮಾರಕ
----------------
ನಾನು ಬದುಕಿದ್ದಾಗ
ಹೊಲವೆಂದರೆ ಅಚ್ಚುಮೆಚ್ಚು
ಹಾಗಾಗಿ ಈಗ

ಹೊಲದಲ್ಲಿ ನಿಲ್ಲಿಸಿದ್ದಾರೆ
ನನ್ನದೇ ಬೆಚರ್ು.

172 ಮನದ ಕೊಳೆ
----------------------
ಮನೆಯ ಕಸವ
ಬಳಿಯಲು ಬೇಕು
ಕಸಬರಿಕೆ,
ಮನದ ಕೊಳೆಯ ತೊಳೆಯಲು
ಹೊರಳಬೇಕು
ಆಧ್ಯಾತ್ಮದ ಕಡೆಗೆ.

173 ಸಾಮಿಪ್ಯ
--------------
ಪ್ರತಿ ಇರುಳಲಿ
ಇನಿಯನ
ಇರುವಿಕೆಯಿದ್ದಲ್ಲಿ
ನಾರಿಯ ನರಳುವಿಕೆಯೆಲ್ಲಿ?

174 ನಗಾರಿ
----------------
ನನ್ನೆದೆಯೊಳು
ನಗಾರಿ ಭಾರಿಸುತ್ತಿದೆ
ನಾರೀ,
ನಿನ್ನ ಸೆರಗು ಬಾರಿ ಬಾರಿ
ಬೀಳುವಾಗ ಜಾರಿ.

175 ಊಹೆ
----------------
ಹೂವಿನಂತ ಮನಸ್ಸು
ಹಾವಿನಂತ ಮನಸ್ಸು
ಮನುಷ್ಯನೊಬ್ಬನಲ್ಲಿರುವುದು.

176 ಅಹಂಭಾವ
------------------
ಅಹಂಕಾರವೆಂಬ
ಶೂಲ,
ಇರಿಯುತ್ತಿದೆ
ಸ್ಥೂಲ ವರ್ಚಸ್ಸಿನ
ಶೀಲ.

177 ಕನಸು
----------------
ಒಂದೊಂದು ವಯಸ್ಸಿನಲ್ಲಿಯೂ
ಒಂದೊಂದು ಮನಸು,
ಒಂದೊಂದು ಮನಸ್ಸಿನಲ್ಲಿಯೂ
ವಿಭಿನ್ನ ಕನಸು,
ಕೆಲವು ಗೆಣಸು
ಕೆಲವು ಮೆಣಸು
ಕೆಲವು ಹೂಕೋಸು.

178 ನಿಜ
-------------
ಮನಸಿರದ
ಮನಸು
ಖಾರದಂತೆ
ಮೆಣಸು.

179 ವೃದ್ಧ
----------------
ಹರೆಯದ
ಪುಟಗಳನ್ನು
ಹರಿದು ಹಾಕಿದವ.

180 ಅಸಹ್ಯ
----------------
ಸಂತೆಗೆ ಹೋಗಲು
ಬಲು ಬೇಜಾರು,
ಕಾರಣ
ಗಬ್ಬು ನಾರುತಿದೆ
ಬಾಜಾರು.

181 ಹಣ್ಣು
--------------------
ಕಳಿತರೆ ರುಚಿ
ಅದೇ
ಕೊಳೆತರೆ ಛೀ.

182 ಹೆಂಗಸರು
---------------------
ಮೀಸೆ
ಬೇಕಾದರೂ ಬಿಟ್ಟಾರು
ಆಸೆಯನ್ನೆಂದೂ ಬಿಡರು.

183 ಅಡಿಕೆ
---------------
ಅಷ್ಟಷ್ಟು ದಿನಕ್ಕೆ
ತಿರುವಿ ಒಣಗಿಸಲು
ಮಗುಚದಿದ್ದರೆ ಮಗ್ಗಲು,
ಹೆಚ್ಚು ಹೊತ್ತು ಬೇಡ
ಮುಗ್ಗಲು.

184 ಕಾವ್ಯ ಜನನ
------------------
ಕಾವ್ಯೋದ್ಭವಕ್ಕೆ
ಪ್ರೇರಣೆಯೇ ಮೂಲ
ಕಲ್ಪನೆಯೇ ಬಾಲ.

185 ಕಾಯುವಿಕೆ
--------------------
ಕಾಯುವುದರಲ್ಲಿ
ನಿನ್ನನ್ನೇ ಮೀರಿಸಿ ಬಿಟ್ಟೇನು
ಶಬರೀ,
ಏಕೆಂದರೆ ನನ್ನ ನಲ್ಲೆ
ನಿನ್ನಂತೆ ವೃದ್ಧೆಯಲ್ಲ
ಸುಂದರಿ ಸುರಸುಂದರಿ.

186 ನಮ್ಮ ದೇಶ
-----------------
ವಿಭಿನ್ನ, ವಿಚಿತ್ರ, ವಿಶಿಷ್ಠ
ವಿನೂತನವಾದದ್ದು ನಮ್ ದೇಶ,
ಇಲ್ಲಿ ಬಡವ
ಬಡವನಾಗ್ತಾ ಹೋಗುತ್ತಾನ,ೆ
ಶ್ರೀಮಂತ
ಸಿರಿವಂತನಾಗ್ತಾ ಹೋಗುತ್ತಾನೆ,
ದುಡಿಯುವವ
ದುಡಿಯುತ್ತಲೇ ಇರುತ್ತಾನೆ,
ದುಡಿಯದವನೂ
ಆರಾಮಾಗಿರುತ್ತಾನೆ.

187 ವಿಭಿನ್ನತೆ
------------------
ಹಿಂದಿನವರಿಗೆ
ಮಕ್ಕಳೇ ಆಸ್ತಿ
ಅದನ್ನೇ ಜಾಸ್ತಿ ಮಾಡುತ್ತಿದ್ದರು,
ಈಗಿನವರಿಗೆ
ಆಸ್ತಿಯೇ ಮಕ್ಕಳು,
ಮಕ್ಕಳಿದ್ದರೂ ಇರದಿರೂ
ಮಾಡಿದ ಆಸ್ತಿಗೆ ಲೆಖ್ಖವಿಲ್ಲ.

188 ಗುದ್ದೆ
---------------
ಭತ್ತದ ಗದ್ದೆಗಳು
ರೈತರ ಪಾಲಿಗೆ
ಕಟ್ಟಿಕೊಂಡ
'ಗುದ್ದೆ'ಗಳು.

189 ಮಹಿಳೆ
----------------
ಇಳೆಗೆ
ಮಳೆ, ಬೆಳೆ, ಹೊಳೆಯೇ
ಕಳೆ,
ಮನೆಗೆ
ಮಳೆ, ಬೆಳೆ ಕಳೆ ಎಲ್ಲಾ
ಅವಳೇ.

190 ಗ್ಯಾರೆಂಟಿ
-----------------
ಕಷ್ಟದಲೂ, ನಷ್ಟದಲೂ
ಇಷ್ಟ ಹೆಜ್ಜೇ ಇಟ್ಟರೆ
ಸ್ಪಷ್ಟ ಜಯಮಾಲೆ
ನಮ್ಮ ಕೊರಳಿಗೆ.

191 ವಾಸ್ತವ
-----------------
ಕಣ್ಣು ಹಣ್ಣಾಗುತ್ತದೆ
ಮನದೊಳಗಿನ ಕಲ್ಮಶ
ಕೊಳೆತು ಹುಣ್ಣಾಗುತ್ತದೆ
ಬಣ್ಣ ಬಯಲಾಗುತ್ತದೆ
ಉರಿ ತಣ್ಣಗಾಗುತ್ತದೆ
ಮಣ್ಣೊಳಗೆ ಮಣ್ಣಾಗುತ್ತದೆ
ಮಧಾಂದನ ಮಹತ್ವಾಕಾಂಕ್ಷೆ.

192 ಆಳ
----------------
ಅವಳ
ಹೃದಯಾಂತರಾಳದಲ್ಲಿ
ನುಗ್ಗಿದಾಗಲೆಲ್ಲ
ಭಾವನೆಗಳೇ ಬಹಳ.

193 ರಸಿಕ
--------------
ಭಾವನೆಗಳು
ಬತ್ತಿ ಹೋದ
ಬರಡೆದೆಯ ಭೂಮಿಯಲ್ಲಿಯೂ
ಆಸೆಗಳ ಬೀಜ ಬಿತ್ತುವವ.

194 ವ್ಯಯ-ಸಾಯ
-----------------------
ವ್ಯವಸಾಯ
ಮಣ್ಣಿನ ಮಕ್ಕಳಿಗೆ
ವ್ಯಯ ಸಾಯವಾಗಿ
ಪರಿಣಮಿಸಿದೆ.

195 ಬೊಕ್ಕಸ
-------------------
ಧನ, ಕನಕ
ವಜ್ರ ವೈಢೂಯರ್ಾದೆಗಳಿಂದ
ತುಂಬಿಕೊಂಡಿದ್ದರೆ
ಮಾತ್ರವದು ಬೊಕ್ಕಸ,
ಬರಿದಾಗಿದ್ದರೆ ಅಲ್ಲಿರುವುದು
ಬರೀ ಕಸ.

196 ಶ್!!!
---------------
ಕಾಲು ಹಾದಿಯಲ್ಲಿ
ಒಮ್ಮೆಲೆ ಎದೆ ಧಸ್!
ಬಹುಷಃ
ಹಾದಿ ಮಧ್ಯೆ
ಹಾವೊಂದು ಭುಸ್!!!

197 ವ್ಯತ್ಯಾಸ
-----------------
ಮಂತ್ರ ಶಾಸ್ತ್ರ ಕಲಿತ ಆಕೆ
ವೈಧಿಕಳಾಗಿ
ದೇವರ ಪೂಜೆ ಮಾಡಿದರೆ
ಪೂಜಾರಿಣಿ,
ಹೀಗಿದ್ದೂ
ಅನೈತಿಕ ಚಟುವಟಿಕೆಗಳಲ್ಲಿ
ಭಾಗಿಯಾದರೆ
ಫೂ...........ಜಾರಿಣಿ.

198 ಮಂತ್ರಿಗಿರಿ ಆಕಾಂಕ್ಷಿ
----------------------
ಕೋಠಿ ರೂಪಾಯಿ
ನಿಮ್ಮ ಖಚರ್ಿಗಿರಲಿ
ಖುಚರ್ಿ ಮಾತ್ರ
ನನಗಿರಲಿ.

199 ಅಸತ್ಯ
------------------
ಹಳ್ಳಿಗರಿಗೆ
ಅಕ್ಷರ ಪಥ್ಯ
ಇದು
ಅಕ್ಷರಷಃ ಅಸತ್ಯ.

200 ನ(ಗ)ರ
--------------
ದಿನೇ ದಿನೇ ಸಮರೋಪಾದಿಯಲ್ಲಿ
ಬೆಳೆಯುತ್ತಿರಬಹುದು
ನಗರ,
ಒಂದು ನಗರ ಬೆಳೆಯಲು
ಸಾವಿರಾರು ಹಳ್ಳಿಗಳೇ
ಮೂಲ ನರ.

201 ಪೋಸ್ಟ್
-------------------
ಲೇಟಾಗಿ ಬಂದರೆ ಪೋಸ್ಟು
ಯಾರಿಗೂ ಬೇಡವಾದ ವೇಸ್ಟು
ಲಘು ಬಂದರೆ ಮಾತ್ರ ಲೇಟೆಸ್ಟು

202 ಕೂಲಿಕಾರರು
---------------------
ಮಕ್ಕಳ
ಭವಿಷ್ಯ ರೂಪಿಸಿದ
ಕೂಲಿಕಾರರು
ಭವಿಷ್ಯದ ಕಲಾಕಾರರು.

203 ಮೀಸೆ
----------------
ನವ ಯುವಕನ ಮನದಲ್ಲಿ
ಒಸರಿತ್ತು ನಿರಾಸೆ,
ಇದ ಕಂಡು
ಕುದಿಯತೊಡಗಿತ್ತು,
ಆತನ ದಷ್ಟಪುಷ್ಠ
ಮೀಸೆ.

204 ರಾಸಾಯನಿಕ ಬಳಕೆ
-------------------------
ರಾಸಾಯನಿಕ ಗೊಬ್ಬರ,ಔಷಧಿ ಬಳಸಿ
ಅಧಿಕ ಫಸಲು ತರುವುದು
ಕ್ಷಣಿಕ ಹಿತ,
ಪರಿಣಾಮ
ಮಣ್ಣಿನಲ್ಲಿ ಅಡಗಿರುವ
ಕೋಟ್ಯಾನುಕೋಟಿ
ಸೂಕ್ಷ್ಮ ಜೀವಿಗಳು ಹತ.

205 ಜ್ಞಾನ ತೃಷೆ
-----------------
ಜ್ಞಾನಾಂಮೃತವ
ತುಂಬಿಸಿಕೊಳ್ಳಿ
ಪುಸ್ತಕದಿಂದ
ಮಸ್ತಕದ ತುಂಬ.

206 ಹೊಸಗಾದೆ
----------------
ವಿದೇಶದಲ್ಲಿ
ಆಳಾಗಿ ದುಡಿ,
ಸ್ವದೇಶದಲ್ಲಿ
ಅರಸನಾಗಿ ಉಣ್ಣು.

207 ಬೆವರು
-------------------
ಮಳೆಗಾಲದಲ್ಲಿ
ಮಳೆ ಸುರಿಯೆ
ಮೈಮೇಲೆಲ್ಲ ನೀರು,
ಬೇಸಿಗೆಯಲ್ಲಿನ
ರಣ ಬಿಸಿಲಿನ ಝಳ ಬೀಳೆ
ಮೈತುಂಬಾ ಬೆವರು.

208 ಬುತ್ತಿ
-----------------
ಬರಿದಾಗಿದ್ದರೆ
ನೆತ್ತಿ,
ಗ್ರಂಥಾಲಯಕ್ಕೆ ಹೋಗಿ
ತುಂಬಿಸಿಕೊಳ್ಳಿ
ಬುತ್ತಿ.

209 ಯಾಚನೆ
---------------
ನಲ್ಲ
ನಾ ಬೇಡನಲ್ಲ,
ಆದರೂ ಯಾಚಿಸುವೆ
ನಿನ್ನಲ್ಲಿ ಮಾತ್ರ
ಪ್ರೇಮ ಭಿಕ್ಷೆ,
ನೀಡಿದರೆ ನಮ್ಮ
ಪ್ರೀತಿಗೆೆ ಶ್ರೀರಕ್ಷೆ,
ಸಂಸಾರಕೆ ನಕ್ಷೆ.

210 ಆಸೆಗಳ ಆಳ
------------------
ಬತ್ತಿದ ಭಾವನೆಗಳು
ಹೊರ ಚಿಮ್ಮಲು
ಆಸೆಗಳೇ ಬಂಡವಾಳ.

211 ದಂತಕ್ಷಯ
-------------------
ಮಿಠಾಯಿ ಅಂಗಡಿ
ಎದುರಿಗೆ ಸಾಗುವಾಗ
ಕಂದನ ಬಾಯಲ್ಲಿ
ಸುರಿವುದು ಜೊಲ್ಲು,
ಅಪ್ಪನ ಮೊಗ ಸಿಂಡರಿಸಿತ್ತು
ಕಾರಣ
ಕಂದನ ಬಾಯ್ತುಂಬಾ
ಹುಳುಕು ಬಲ್ಲು.

212 ವಿಪಯರ್ಾಸ
----------------------
ಹಟ ಮಾಡಿಕೊಂಡು
ನಾಪತ್ತೆಯಾದ ವಿಟ
ಕೊನೆಗೆ ಪತ್ತೆಯಾದ ಜಾಗ
ಮಠ.

213 ಪರಿಸ್ಥಿತಿ
----------------
ಬರೆಯಲು ಸ್ಪೂತರ್ಿ ಬಂದಾಗ
ಹಾಳೆಯಿದ್ದೂ ಪೆನ್ನಿರದಿದ್ದರೆ.........
ಯುದ್ಧಕ್ಕೆ ಹೊರಟ
ಯೋಧನ ಕೈಲಿ ಆಯುಧವಿರದಾಗ
ಉಂಟಾಗುವ ಪರಿಸ್ಥಿತಿಯೇ
ಕವಿಯದೂ ಕೂಡಾ .

214 ವಿದ್ಯೆ
---------------
ಅಕ್ಷರಾಭ್ಯಾಸ ಹೊಂದಿದರೆ
ಖಂಡಿತಾ ಮಾಯ
ಅಜ್ಞಾನದ ಗಾಯ.

215 ಅಸಡ್ಡೆಯಾದ ಕೃಷಿ
-------------------------
ಹಳ್ಳಿ ಹುಡುಗರು
ಮೊದಲಿನಂತಿಲ್ಲ
ತುಂಬಾ ಸುಧಾರಿಸಿದ್ದಾರೆ,
ಜಾಣರಾಗಿದ್ದಾರೆ
ಪೇಟೆಗೆ ಹೋಗ್ತಾರೆ
ಆಚಾರಿ, ಗಾವಡಿ,ಹೋಟೆಲ್,ಫ್ಯಾಕ್ಟರಿ,
ಈ ಎಲ್ಲಾ ಕೆಲಸಗಳನ್ನೂ ಮಾಡ್ತಾರೆ
ಕೃಷಿ ಕಾರ್ಯ ಒಂದನ್ನು ಬಿಟ್ಟು.

216 ಅಮರ
----------------
ನೀವು ಸತ್ತ ಮೇಲೂ
ಆಗಬೇಕೆ ಅಮರ,
ಹಾಗಾದರೆ
ನೆಟ್ಟು ಬೆಳೆಸಿ
ಒಂದು ಮರ.

217 ಕೀ(ರೀ)ಟ
-----------------
ರಾಜನಾದ ಬಳಿಕ
ಶಿರ ಅಲಂಕರಿಸಿದ್ದು
ರಾಜ ಕಿರೀಟ,
ಅದೇ ರಾಜನ
ತಲೆಗೆ ಹೊಕ್ಕ ಹೇನು
ರಾಜ ಕೀಟ.

218 ಕಸ ರಸ
-----------------
ಕಸದಿಂದ ರಸ ತೆಗೆವವ
ಆದಾನು ಅರಸ,
ಅದೇ ಕಸ
ಅಕ್ಕ ಪಕ್ಕದ ಮನೆ ಜನರಿಗೆ
ತಂದಿಟ್ಟಿತ್ತು ವಿರಸ.

219 ಅಳುಕು
----------------
ಬೆದರಿಸದಿದ್ದರೂ
ಬೆವರುವವನು
ತಪ್ಪೆಸಗಿದವನು.

220 ಧನದಾಹ
-----------------
ಹೆತ್ತು ಹೊತ್ತು ಸಾಕಿ ಸಲಹಿದ
ಮುದ್ದು ಮುಖದ ಕಂದನ
ಮಾರುವುದೇಕೆ ಗೊತ್ತೇ?
'ಕಂ' ಧನ.

221 ವಿಚಿತ್ರ
----------------
ಹೆಣ್ಣು ಜಾರಿದರೆ
ಜಾರಿಣಿಯೆಂಬ ಚಟ್ಟ,
ಅದೇ ಗಂಡು ಜಾರಿದರೆ
ರಸಿಕ ಮಹಾಶಯನೆಂಬ ಪಟ್ಟ.

222 ಹೆತ್ತೊಡಲು
-------------------
ಹೆತ್ತ ಮಗುವಿಗೆ
ಒಂದು ವೇಳೆ
ಜನಕನಿರದಿರೂ,
ಧನ ಕನಕವಿರದಿರೂ,
ಮಾತೃವಾತ್ಸಲ್ಯವೇ ಜನಕ
ಅದುವೇ ಆಮ್ಲಜನಕ.

223 ಮುಖವಾಡ
----------------
ನೋವು, ದುಃಖ, ಕಷ್ಟನಷ್ಟಗಳು
ಮನದಲ್ಲಿ ಮನೆ ಮಾಡಿದರೂ
ಧರಿಸದಿರು ಮನುಜಾ
ನಗು ಮುಖದ ಮುಖವಾಡ,
ಅದು ಮುಂದೆ ಮತ್ತೂ
ಸಂಕಷ್ಟದ ಆಖಾಢ.

224 ಅನಾವೃಷ್ಠಿ
----------------
ಮಳೆಗಾಲದ ಅವಧಿ
ಮಳೆ ಬರದಿರೆ ಬೇಗುಧಿ,
ಮಳೆ ವಿಪರೀತವಾದರೆ
ಹೊಲ ನೆಲವೆಲ್ಲಾ ಶರಧಿ.

225 ಕಣ್ಣೀರು
---------------
ಹೊಸದಾಗಿ ನಿಮರ್ಿಸಿದ
ಆ ಆಣೆಕಟ್ಟು ಭತರ್ಿಯಾಗಿದ್ದು,
ಹಿನ್ನೀರು ತುಂಬಿದ್ದು
ಮಳೆ ನೀರಿನಿಂದ ಮಾತ್ರವಲ್ಲ
ಮನೆ, ಮಠ, ಆಸ್ತಿಪಾಸ್ತಿ,
ತೊರೆದ ತ್ಯಾಗಿಗಳ
ಕಣ್ಣೀರೂ ಇದೆ.

226 ಹಳ್ಳೀ ಹವಾ
-----------------
ಶಹರದ ಗಾಳಿ ಸೇವಿಪಗೆ
ರೋಗ ಬರುತ್ತದೆ,
ಹಳ್ಳಿಯ ಹವಾ ಸೇವಿಪಗೆ
ಜೀವ ಬರುತ್ತದೆ.

227 ಮಳೆ
-------------
ಬಂದರೆ ವರ
ಬರದಿರೆ ಬರ.

228 ಕವಿಯೊಳಗೆ
-------------------
ಕವಿತೆ ಹುಟ್ಟುವುದು
ಸರಳ,
ಓದುಗನ ಮನ ಮುಟ್ಟುವುದು
ಮಾತ್ರ ವಿರಳ.

229 ಸಾರಾಯಿ ಸಹವಾಸ
------------------------
ಹೆಂಡ ಕುಡಿದರೆ
ಬರಬಹುದು ಮತ್ತು,
ಹೋಗುವುದು ಕಿಮ್ಮತ್ತು.

230 ಆಶಾವಾದಿ
-----------------
ಎಂದೂ ಬತ್ತಿಲ್ಲ
ಮುಂದೂ ಬತ್ತುವುದಿಲ್ಲ
ಏಕೆಂದರೆ ನಾ ಆಶಾವಾದಿ,
ನಿರಾಸೆಯ ಬೀಜ ಬಿತ್ತಿಲ್ಲ
ಕರಗಿಲ್ಲ ಆಸೆಯ ಬುತ್ತಿ
ಕನಸಿನ ಬೀಜದಲಿ ಜೊಳ್ಳಿಲ್ಲ.

231 ಕುಡಿತ
-----------------
ಪರಲೋಕಕ್ಕೆ ಧಾವಿಸುವೆ
ಸೀದಾ,
ಕುಡಿದರೆ ಸಾರಾಯಿ
ಸದಾ.

232 ಮೂಢನಂಬಿಕೆ?
-------------------
ಹೇರಳವಾಗಿ
ತುಂಬಿ ತುಳುಕಿದ್ದರೂ
ಉಗ್ರಾಣ,
ತಿನ್ನಬಾರದು ಹಿಡಿದುಕೊಂಡಾಗ
ಗ್ರಹಣ.

233 ಹಣ್ಣು
---------------
ಹಕ್ಕಿಗಳಿಗೆ
ಎಂದು ತಪ್ಪದು ಬುತ್ತಿ,
ಹೇಗೆಂದರೆ
ನೆಟ್ಟು ಬೆಳೆಸಿರುವೆ
ತೋಟದ ಸುತ್ತಲೂ 'ಅತ್ತಿ'

234 ನಂಬಿಕೆ
----------------
ಆರದ್ರಾ ಮಳೆ
ಆರದೇ ಹೊಯ್ದರೆ
ಬೆಳೆ ಕಳೆ ಭದ್ರ,
ಆರಿ ಆರಿ ಹೊಯ್ದರೆ
ಆ ಬಾರಿ ಅದ್ರ.

235 ಸನ್ಮಾನ?
----------------
ಸದಾ ಸೇವಿಸಿದರೆ
ಸಾರಾಯಿ,
ಸ್ವಾಗತಿಸುತ್ತದೆ
ಯಮರಾಯನ ಆಸ್ಥಾನದಲ್ಲಿ
ಹಾರ ತುರಾಯಿ.

236 ಚಿಂತೆ
-----------------
ಲವಲವೇಶವೂ
ಚಿಂತೆ ಇರದ ಮನ
ಅರಳುತಿರುವ ಕುಸುಮ,
ಚಿಂತೆ ಆವರಿಸಿದರೆ
ಹೃದಯ ಚಿತೆಯಂತೆ
ಭಸ್ಮ .

237 ಅವ-ಲಕ್ಕಿ
----------------
ನೆರೆ ಸಂತ್ರಸ್ತರ ಪೈಕಿ
ಎಲ್ಲರಿಗಿಂತ ಆತ ಬಹಳ
ಲಕ್ಕಿ,
ಪರಿಹಾರ ವಿತರಣೆಯ ವೇಳೆ
ಬಚ್ಚಿಟ್ಟುಕೊಂಡು ಬಿಟ್ಟಿದ್ದ
ಒಂದು ಮೂಟೆ ಅವಲಕ್ಕಿ.

238 ವೆನಿಲ್ಲಾ
----------------
ಮಾಡಲು ತಿಳಿಯದವ
ಪರಾಗ ಸ್ಪರ್ಶ,
ಅವನು ವೆನಿಲ್ಲಾ ಸಂಕುಲಕ್ಕೆ
ಅಸ್ಪರ್ಶ.

239 ಮಾಡಿದುಣ್ಣೋ.........
---------------------
ಸಸಾರ ಪ್ರಶ್ನೆ ಕೇಳಿರೆಂದು
ಮೇಸ್ಟ್ರಿಗೇ ಹಾಕಿದ್ದ
ದಮಕಿ,
ಆ ಪೋರ
ಪರೀಕ್ಷೆಯಲ್ಲಿ ಹೊಡೆದ
ಡುಮಕಿ.

240 ಪಂಚರ್
------------------
ಮಧ್ಯ ಹಾದಿಯಲ್ಲಿ ನಿಂತರೆ
ಚಲಿಸುತ್ತಿರುವ ಬಸ್
ಬಹುಷಃ ಅಂದಿರಬೇಕು
ಟಾಯರಿನ ಗಾಳಿ ಟುಸ್.

241 ಢಾಂಬಿಕತೆ
--------------------
ನಾಸ್ತಿಕತೆ,ಆಸ್ತಿಕತೆಗಳಿಗೆ
ಎಲ್ಲಿದೆ ವಾಸ್ತವಿಕತೆ?
ಎಲ್ಲಿದೆ ಸಮನ್ವಯತೆ?
ಎಲ್ಲಾ ಬರಿ ಢಾಂಬಿಕತೆ.

242 ವೈಮನಸ್ಯ
------------------
ಮುನಿಸಿಕೊಂಡಾಗ
ಮಡದಿ,
ನಾ ಬಳಲಿ ಬೆಂಡಾಗುವೆ
ವಿರಹದಿ.

243 ರಾಮಬಾಣ
---------------------
ಆತ ಮುನಿಸಿಕೊಂಡಾಗ
ಗರಿಗೆದರುವುದು
ಆಕೆಯ ವೈಯ್ಯಾರ ಬಿನ್ನಾಣ,
ಆತನ ಗಂಟು ಮೊಗವ
ನಗಿಸಲದೇ ರಾಮಬಾಣ.

244 ಸಾಕಣೆ
----------------
ನಾನು ಸಾಕಿದ್ದು
ಎರಡು ಕರುಗಳನ್ನು
ಎರಡು ವರ್ಷ,
ಅವು ಹಸುಗಳಾಗಿ
ಎಂಟು ಜನರನ್ನು
ಎಂಟು ವರ್ಷ
ಸಾಕಿದವು.

245 ವಾಸ್ತವ
----------------
ನಲ್ಲೇ
ನೆಚ್ಚಿಕೊಂಡಿದ್ದರೆ
ನಿನ್ನ ಅಧರ,
ತುಂಬುವುದಿಲ್ಲ
ನಮ್ಮ ಉದರ.

246 ವ್ಯವಧಾನ
----------------
ವ್ಯವಸಾಯಕ್ಕೆ ಬೇಕು
ವ್ಯವಧಾನ,
ಅನುಭವವಿರದಿರೆ
ಆಗುವುದು ಅಧ್ವಾನ.

247 ವ್ಯತ್ಯಾಸ
---------------
ಚುನಾವಣೆಗೆ ಮುನ್ನ
ರಾಜಕಾರಣಿಗಳಿಗೆ
ಮತದಾರನೇ ದೇವರು,
ನಂತರ ಮತದಾರನಿಗೆ
ವಿಜೇತ ಅಭ್ಯಥರ್ಿಯೇ ದೇವರು.

248 ನಿಧಿ
--------------
ಮೌನ, ಮಾನವತೆ
ಮಾನವನಿಗೆ
ಇರಬೇಕಾದ
ಮಹಾ ನಿಧಿ.

249 ಓದುಗರು
----------------
ಪುಸ್ತಕ
ವಿದ್ಯಾವಂತನಿಗೆ
ಅತ್ಯಾಪ್ತ ಸಂಗಾತಿ,
ಓದುಗರಿರದಿರೆ
ಪುಸ್ತಕದ ಸಂತತಿಗೆ
ಒದಗುವುದು ಅವನತಿ.

250 ಯಜಮಾನ
-----------------
ಮನೆ ಮಂದಿಯ
ಕಷ್ಟ ನಷ್ಟ
ನೋವು ನಲಿವುಗಳಲ್ಲಿ
ಪಾಲುದಾರಿಕೆಯ ಬಾದ್ಯತೆ
ವಹಿಸಿಕೊಳ್ಳುವವನಿಗಿದೆ
ಸಂಸಾರದ ಸೂತ್ರಧಾರನಾಗುವ
ಅರ್ಹತೆ.

251 ಚಹರೆ
-----------------
ಅವಳ ಮೊಗ
ತುಸು ಕಪ್ಪು
ಹಾಗಾಗಿ ಮಾಡಿಕೊಳ್ಳುವಳು
ಮೇಕಪ್ಪು.

252 ಕನ್ನ
---------------------
ರನ್ನ, ಚಿನ್ನ ಎಂಬ
ಮುದ್ದಿನಿಂದ ಇಟ್ಟ ಹೆಸರೇ
ಮುಳುವಾಯಿತಲ್ಲ!
ಮಗಳ ಮಾವನ ಮಗ ಮದನ
ಹಾಕಿ ಬಿಟ್ಟ ಕನ್ನ.

253 ಅಪರಾಧಿ
------------------
ಅಂಜದೆ ಅಳುಕದೆ
ತಿರುಚಿರಿ ಅವನ ಕೈಕಾಲು,
ಕಾನೂನನ್ನೇ ತಿರುಚುವುದಾಗಿತ್ತು
ಅವನ ಅಹವಾಲು.

254 ವಿರಕ್ತಿ
------------------
ಬದುಕಿನ ನೋವು,
ದುಃಖ,ನಷ್ಠಗಳನ್ನು
ಎದುರಿಸಲಾಗದ ಹೇಡಿಗೆ
ನುಣುಚಿಕೊಳ್ಳಲು ಒಂದು ಯುಕ್ತಿ.

255 ಪರಿತಪಿತ
----------------
ಕಸಬರಿಕೆಯಿದ್ದೂ
ಗುಡಿಸಲಾಗಲಿಲ್ಲ,
ಮನದೊಳು ಮನೆಮಾಡಿದ
ಕಲ್ಮಶಗಳ ರಾಶಿಯ.

256 ಕೇಶರಾಶಿ
------------------
ಹೇನು, ಹೈರಣೆ, ಹೊಟ್ಟುಗಳು
ಅಡಗಿದ್ದರೆ ಅದು
ಕ್ರಿಮಿಕೀಟಗಳ ಕೂಟ,
ಜಾಜಿ, ಮಲ್ಲಿಗೆ, ಸಂಪಿಗೆ
ಮುಡಿದಿದ್ದರೆ
ಹೂವಿನ ತೋಟ.

257 ಕವಿಗೆ
----------------
ಅವನು ಆರೋಗ್ಯದಿಂದಿದ್ದರೆ
ಸೌಖ್ಯ,.
ಹೃದಯಾಂತರಾಳದ ಶೆಲೆಯಿಂದ
ಒಸರಿ ಬರಬಹುದು
ಕಲಾತ್ಮಕ ವಾಕ್ಯ.

258 ಕವನ
----------------
ನೋವು ನಲಿವಿಗಳಿಗೆ
ತಾಯಿ ಬೇರು,
ಆದರೆ ಆಲಿಸಲು
ಬಲು ಬೋರು.

259 ಬೆಳವಣಿಗೆ
--------------------
ಕನ್ನಡದ ಅಸ್ಥಿತ್ವ
ಗುರುತಿಸಿದರದೇ
ಕನ್ನಡಮ್ಮನ ಸ್ವಾಸ್ಥ್ಯ .

260 ಸಕರ್ಾರಿ ಕಚೇರಿ
--------------------
ಕೇವಲ ಸಿಕ್ಕಾ ಹಾಕೋಕೂ
ತಗೋತಾರಲ್ಲ ಶುಲ್ಕ,
ಆ ಜನರ ಗುಣ
ಬಾಳಾ ಹಲ್ಕಾ.

261 ಕಾವ್ಯ ಜನನ
-----------------
ನಾಡಿನವಕೆ ಹೆದರಿ
ಕಾಡಿನಲ್ಲಿ ಅವಿತೆ,
ಆಗ ಮನದಿ ಮೂಡಿ ಬಂತು
ಒಂದಿಷ್ಟು ಕವಿತೆ.

262 ಪಲಾಯನವಾದಿ
----------------------
ಮಾಡದವ
ಹೊಲ ಮನೆ ದನಕರುಗಳ
ಚಾಕರಿ,
ಮಾಡ ಬಯಸುತ್ತಾನೆ
ಮೈ ಮುರಿದು ದುಡಿಯದ
ಬೆವರ ಹನಿ ಇಳಿಯದ
ನೌಕರಿ.

263 ವ್ಯಾಟ್
-----------------
ಈ ಒಪ್ಪಂದದಿಂದ
ಪ್ರತೀ ವಸ್ತುಗಳ ಮೇಲೂ
ವಿಧಿಸುವರಂತೆ ಕರ,
ಇವರಿಗೆ
ಜನಸಾಮಾನ್ಯರ ಮೇಲೆ
ಒಂದಿನಿತೂ ಇಲ್ಲವೇ
ಕನಿಕರ?

264 ಜಾತ್ಯಾತೀಯತೆ
-----------------------
ವಿವಿಧ ಜಾತಿ ಧರ್ಮಗಳ
ಕೂಡಿಸಿ ಬೆಸೆದರೆ ಕಸಿ,
ಭಾರತದ ಜನತೆಯೆಂದರೆ
ಅದೆಷ್ಟು ಖುಷಿ.

265 ಬೆಡ್ ರೆಸ್ಟ್
----------------
ಶಾಂತಿ ಸಮಾಧಾನ ನೆಮ್ಮದಿ
ನೀಡದ ಶ್ರೀಮಂತಿಕೆ
ಇದ್ದರೆಷ್ಟು ಬಿಟ್ಟರೆಷ್ಟು
ರೋಗ ಬಂದರೆ
ಪ್ರಾಯದಲ್ಲಿಯೇ
ಬ್ರೆಡ್ಡೂ-ರೆಸ್ಟೂ.........

266 ಅಲಂಕಾರ
--------------
ಹದ್ದು ಬಸ್ತಿನಲ್ಲಿ
ಇಟ್ಟುಕೊಂಡರೆ
ಅಹಂಕಾರ,
ಅದೇ
ಮನುಷ್ಯನ ನಿಜವಾದ
ಅಲಂಕಾರ.

267 ಸ್ಪಧರ್ೆಯಲ್ಲಿ
----------------
ಗೆದ್ದವನಿಗೆ
ಹೊಗಳಿಕೆಯೆಂಬ
ಪಟ್ಟ,
ಪಾಪ
ಸೋತವನ ಮುಖ ಮಾತ್ರ
ಸೊಟ್ಟ.

268 ಅಧ್ವಾನ
----------------
ಹಿಂದೂಸ್ತಾನದ
ಅಡ್ವಾಣಿ,
ಪಾಕಿಸ್ತಾನದಲ್ಲಿ
ಅಡ್ಡ-ವಾಣಿಿ .

269 ಹೊಸದು
----------------
ಅಂಗಡಿಯಲ್ಲಿ
ದರ ಹೆಚ್ಚಾದರೂ
ಹೊಸದು,
ಅದೇ ಪುಟ್ಬಾತ್ ನಲ್ಲಿ
ಅರ್ಧ ದರಕ್ಕೆ ಕೊಂಡದ್ದು
ಮಾತ್ರ ಹೊಸದ್ದು.

270 ಸೋಲು ಗೆಲುವು
---------------------
ಸೋತವರಿಗೆ
ಇದ್ದೇ ಇದೆ
ಗೆಲುವಿನಾ ಘಟ್ಟ,
ಗೆಲುವಿನ ಅಮಲೇರಿದವರಿಗೆ
ಕಟ್ಟಿಟ್ಟ ಬಿತ್ತಿ
ಸೋಲೆಂಬ ಚಟ್ಟ.

271 ಅಂಜಿಕೆ
---------------
ಬಣ್ಣಕ್ಕಿದೆ
ಮಾಸುವ ಅಂಜಿಕೆ,
ಬಣ್ಣ ಬಣ್ಣದ ಕನಸಿಗೆ
ಹೊಂಗನಸಿಗೆ
ಯಾವ ಬೆದರಿಕೆ?

272 ಮನಸ್ಸು
------------------
ಕನಸಿಗೂ ಮನಸಿಗೂ
ಅವಿನಾಭಾವ ಸಂಬಂಧ,
ಒಳ್ಳೆಯ ಮನಸಿಗೆ
ಸುಂದರ ಕನಸು
ಒಲ್ಲದ ಮನಸಿಗೆ
ಬೀಳಲಿದೆ
ಕೆಟ್ಟ ಕನಸು.

273 ಕಲಿಗಾಲ
-----------------
ನಂಬಿಪನ
ನಿಂದಿಪನು
ದುಷ್ಟ,
ನಿಂದಿಪನ
ನಂಬುವುದು ಕಷ್ಟ.

274 ಮರಳಿ ಮಣ್ಣಿಗೆ
---------------------
ಅಧಿಕಾರ, ಪ್ರತಿಷ್ಠೆ,
ಧನ ಕನಕಗಳೊಡೆಯನು
ರಾಜವೈಭೋಗ
ಕಂಡರೂ ಕಣ್ಣಿಗೆ,
ಮುಂದೆ
ತೆರೆಯ ಮರೆ ಸರಿದಾಗ
ಎಲ್ಲಾ ನುಣ್ಣಗೆ
ಮರಳಲೇ ಬೇಕು
ಮಣ್ಣಿಗೆ.

275 ನದಿ ಮತ್ತು ಮನಸ್ಸು
-----------------------
ಇವೆರಡೂ ಹರಿಯುತ್ತವೆ,
ಕೆಟ್ಟ ಮನಸ್ಸು
ಇರಿಯುತ್ತದೆ,
ಬರಗಾಲದಿ
ನದಿ ಬಿರಿಯುತ್ತದೆ.

276 ಭೀತಿ
--------------
ಕನಸು ಕಾಣಲು
ಕಾಸಿಲ್ಲ ನಿಜ,
ಒತ್ತಾಸೆಯ ಕನಸುಗಳಿಗ
ಕಲಸು ಮೇಲೋಗರವಾಗುವ
ಭೀತಿ.

277 ಮಧ್ಯವತರ್ಿಗಳು
--------------------
ಬಂದಾಗ
ಹೊಸ ವಸ್ತು
ಮಾರುಕಟ್ಟೆಗೆ,
ಅಲ್ಪ ಸ್ವಲ್ಪ ಮಾತ್ರವೇ
ಉತ್ಪಾದಕರ ತಟ್ಟೆಗೆ
ಅವರ ಹೊಟ್ಟೆ ಬಟ್ಟೆಗೆ,
ಉತ್ಪಾದನೆಯ ಬಹುಪಾಲು ಲಾಭಾಂಶ
ದಲ್ಲಾಳಿಗಳ ಪೆಟ್ಟಿಗೆಗೆ.

278 ನೆಗಡಿಗೆ ಮೂಲ
--------------------
ಎಳೆ ಸೌತೆಕಾಯಿ ಹಶಿ
ಅಂದ್ರೆ ನನಗೆ ಬಹಳ ಖುಷಿ,
ತಿಂದ ಮಾರನೇ ದಿನ
ಮೂಗು ತುಂಬಾ ಆ.....ಕ್ಷಿ.

279 ಕಂಪು
-----------------
ಕುಸುಮ
ಕಾಡಿನಲ್ಲಿ ಅರಳಿದರೂ
ನಾಡಿನಲ್ಲಿ ಅರಳಿದರೂ
ಕುಂದುಂಟಾಗದು
ಸುವಾಸನೆಗೆ.

280 ಫಸಲು
----------------
ಕನಸು ಕಾಣಲು
ಕಂಜೂಸಿತನವೇಕೆ?
ಕವಿಗೂ ಒಂದೇ
ಕಾಮರ್ಿಕನಿಗೂ ಒಂದೇ
ಕನಸು
ನಿದ್ದೆ ಬಲ್ಲವನ
ಭರಪೂರ ಫಸಲು.

281 ದಾಳಿಕೋರರು
-----------------------
ತುಂಬಬೇಕು
ದಾಳಿಕೋರರ ಜೋಳಿಗೆ,
ಅದಿಲ್ಲವಾದರೆ
ಶುರುಮಾಡಿಬಿಡುವರು
ನ್ಯಾಯ-ಅನ್ಯಾಯದ ವಿರುದ್ಧ
ದಾಳಿಗೆ.

282 ಪರಿಣಾಮ
------------------
ತಿಂದರೆ
ವಯಾಗ್ರಾ,
ದೂರವಾದೀತು
ವೈರಾಗ್ಯ.
ಹಾಗೇ ದೂರವಾಗುವುದು
ಆರೋಗ್ಯ.

283 ಪರಿವರ್ತನೆ
-------------------
ಹಿಂದೆ
"ಏ ಬಾರೋ ನಮ್ಮನೆ ಕೆಲಸಕ್ಕೆ"
"ಬಂದೇ ಬಿಟ್ಟೆ ಒಡೆಯಾ"
ಇಂದು
"ಸ್ವಲ್ಪ ಕೆಲಸವಿತ್ತು.ನಾಳೆ ಬಿಡುವಿದೆಯೆ?"
"ನಮ್ಮನೆ ಕೆಲಸ ನೀವು ಮಾಡುವಿರಾ?"

284 ಹುಳುಕು
----------------
ರಾಯರು
ಪಕ್ಕದ ಮನೆಯ
ಶುಭಕಾರ್ಯಕ್ಕೋಸ್ಕರ
ತಮ್ಮನೆಯ
ಅಂಗಳ, ಕೊಠಡಿ,ಬಚ್ಚಲು, ಪಾಯಖಾನೆಗಳನು
ಬಿಟ್ಟು ಕೊಟ್ಟಿದ್ದರು,
ಆದರೆ
ತಮ್ಮ ಮನೆ ಕಾಂಪೌಂಡಿನೊಳಗೆ
ನಾಯಿಯನ್ನು ಮಾತ್ರ ಕಟ್ಟಿ ಹಾಕಲು
ಮರೆತಿದ್ದರು.

285 ರೈತ
-----------------
ದಿನವಿಡೀ
ನೀರು ಕುಡಿದರೂ
ಉಚ್ಚೆ ಹೊಯ್ಯುವುದೇ
ಅಪರೂಪ.

286 ಕೃಷಿಕನ ಜೋಡು
---------------------
ದಾರಿಯಲ್ಲಿ ಸಾಗುವಾಗ
ಕಾಲಿಗೆ
ಕಲ್ಲು ತಾಗುತ್ತದೆಂದು
ರೈತನ ಚಪ್ಪಲಿ
ಹಾಕಿಕೊಂಡೀರಿ ಜೋಕೆ,
ಅವನ ಜೋಡಿಗೆ
ಚುಚ್ಚಿಕೊಂಡಿರಬಹುದು
ಹತ್ತಾರು ಮುಳ್ಳುಗಳು.

287 ರಭಸ
----------------
ಬಲಿತ ಬಾಲೆಗೆ
ರಭಸದ ಬಯಕೆ,
ಛೇಧಿಸಿ ಬಂದೀತು
ಅವಳುಟ್ಟ ಬಿಗಿ ರವಿಕೆ.

288 ಮನುಜನ ಮನಸ್ಸು
-------------------------
ಬೆಳಕು ಹೋಗದ ಕಡೆ
ಗಾಳಿ ನುಸುಳಬಹುದು,
ಗಾಳಿ, ಬೆಳಕು ಸಾಗದ ಕಡೆ
ನೀರು ಒಸರಬಹುದು,
ಈ ಮೂರೂ ಹೋಗದ ಜಾಗಕ್ಕೆ
ಸಾಗುತ್ತದೆ
ಮನುಜನ ಮನಸ್ಸು.

289 ಮೌನ ಮಾತಾಗಲು
-------------------------
ಬಯಕೆಗಳು
ಬಿರಿಯಬೇಕು.
ಆಸೆಗಳು
ಚಿಮ್ಮಬೇಕು,
ಕನಸುಗಳು
ಕರೆಯಬೇಕು
ಮನಸುಗಳು
ಒಂದಾಗಬೇಕು
ಆಗ ಮೌನ ಮುರಿಯುತ್ತದೆ.

290 ರೈತ-ನಕ್ಷತ್ರ
------------------
ಪ್ರಪಂಚಕ್ಕೆ
ನಿಜವಾದ ಸೂರ್ಯ
ರೈತ,
ಜಗತ್ತು ಅವನನ್ನು ನೋಡುತ್ತಿರುವುದು
ನಕ್ಷತ್ರವಾಗಿ
ಮಿಣುಕು ಹುಳುವಾಗಿ.

291 ಪ್ರೇಮಿಗೆ
----------------
ಚಂದಿರನ ಹಂದರದೊಳು
ಮಂದಿರವ ನಾ ಕಾಣೆ
ಎನ್ನ ಹೃದಯ ಮಂದಿರದೊಳು
ರೂಪಾಯಿಗೆ ನೀ ಹದಿನಾರಾಣೆ.

292 ಮರೀಚಿಕೆ
-----------------
ಆಗ ಆ ಬಾಲಿಕೆ
ನನಗೆ ಕಾವ್ಯ ಕನ್ನಿಕೆ
ನಂತರ ಆಕೆ,ನನ್ನಾಕೆಯಾಗಿ
ನನ್ನ ಆಯ್ಕೆ
ಈಗ ನನಗೆ ಕಾವ್ಯ
ಮರೀಚಿಕೆ.

293 ಕವಿತೆ
----------------
ಒಳ್ಳೊಳ್ಳೆ ಹೂಗಳ
ಕೊಯ್ದು ಆಯ್ದು
ಒಂದೊಂದಾಗಿ ಪೋಣಿಸಿ
ಹೂ ಮಾಲೆ ಕಟ್ಟುವಂತೆ
ಕಟ್ಟುವನು ಕವಿ.

294 ಆಸೆ
-----------------
ಅಂದು
ದಿಗಂತದಲ್ಲಿ ಹಾರಾಡುವ ಆಸೆಯಿತ್ತು
ಜೀವಂತವಾಗಿದ್ದಾಗ,
ಇಂದು
ದಿಗಂತದಲ್ಲಿ ಹಾರಾಡುತ್ತಿದ್ದೇನೆ
ದಿವಂಗತನಾಗಿ,
ಆದರೆ ಈಗ
ಭೂಮಿಯ ಮೇಲೆ
ನಡೆದಾಡುವ ಆಸೆಯಾಗಿದೆ
ಭುವಂಗತನಾಗಿ.

295 ಹಣೆ ಬರಹ
---------------------
ಬದಲಾಯಿಸಿದೆ ಮನೆಯ ಮಡದಿಯ
ಬದಲಾಯಿಸಿದೆ ಮನಸ ಕನಸ
ಬದಲಾಯಿಸಿದೆ ಉಡುಗೆ ತೊಡುಗೆ
ಬದಲಾಯಿಸಿದೆ ಭಗವಂತನ
ಆದರೆ ಬದಲಾಯಿಸಲಾಗಲಿಲ್ಲ
ನನಗೆ ನನ್ನ ಹಣೆ ಬರಹವ.

296 ಆಗ-ಈಗ
-------------------
ಅಡಿಕೆಗೆ ಹೋದ ಮಾನ
ಆನೆ ಕೊಟ್ಟರೂ ಬರದು
ಅಡಿಕೆ ರೇಟು ನೋಡಿ
ಕೊಂಡ ಸಾಲ ಈಗ
ತೋಟ ಮಾರಿದರೂ ತೀರದು.

297 ಸಾರ
----------------
ಸಕ್ಕರೆಯ ಸಿಹಿ ಇರುವುದು
ಕಬ್ಬಿನ ರಸದಲ್ಲಿ,
ಸಂಸಾರದ ಸಾರ ಉಳಿವುದು
ಸಮರಸದಲ್ಲಿ.

298 ಅಡಿಕೆ ಜ್ವರ
------------------
ಕೊಂಚ ಏರಿದರೂ
ಅಡಿಕೆ ದರ
ಇಳಿವುದು ಅಡಿಕೆ
ಬೆಳೆಗಾರನಿಗೆ ಬಂದ ಜ್ವರ.

299 ರೈತ
----------------
ಸಾಲದಲ್ಲಿಯೇ ಹುಟ್ಟಿ
ಸಾಲದಲ್ಲಿಯೇ ಬೆಳೆದು
ಸಾಲದಲ್ಲಿಯೇ ಸಾಯುವವನಿಗೆ
ರೈತನೆಂದು ಕರೆಯಬಹುದು.

300 ವೆನಿಲ್ಲಾ
----------------
ಏ ನೀಲಾ! ಏ ನೀಲಾ !
ಎಂದು ಕೂಗದಿರು ನಲ್ಲಾ
ವೆನಿಲಾ! ವೆನಿಲಾ!
ಅಂದುಕೊಂಡು
ಮುತ್ತಿಬಿಟ್ಟಾರು ಎಲ್ಲಾ.

301 ತಿಳಿಯದಿರಲಿ
---------------------
ನಾ ಮೆಚ್ಚಿದ್ದು
ಅವಳ ಕೇಶ ರಾಶಿ ನೋಡಿ ಅಲ್ಲ,
ರೂಪ ರಾಶಿ ನೋಡಿ ಅಲ್ಲ
ರೂಪಾಯಿ ರಾಶಿ ನೋಡಿ.

302 ಕಾಮರ್ೋಡ
--------------------
ಕಾರು ಕಾರುತ್ತ
ಹೋಗುವುದು ಮುಂದೆ
ಕಾರಿದ್ದು ಹಾರುತ್ತ
ಹೋಗುವುದು ಮೇಲೆ
ಅದುವೆ ಕಾರ್ಮೋಡ.

303 ದೇವರ ನಾಮ
---------------------
ದಿ ಪೂತರ್ಿ ದುಡಿಯುವವನ
ಯೋಗ್ಯತೆ ಚೆಂದ
ರೆಂಬೆ ಕೊಂಬೆಗಳ ತುಂಬಾ ಎಲೆಗಳಿರುವ
ಮರ ಚೆಂದ
ಬಾಯಿ ತುಂಬಾ ಭಜಿಸಲು
ದೇವರ ನಾಮ ಅಂದ.

304 ತಿಗಣೆಗಳು
-----------------
ಸಕರ್ಾರಿ ಆಫೀಸುಗಳಿಗೆ ಹೋದರೆ
ಅಲ್ಲಿರುವುದು
ಬರೀ ಕಾಗದ ಪತ್ರಗಳ ಕಡತ
ಬಿಟ್ಟರೆ
ರಕ್ತ (ಲಂಚ) ಹೀರುವ
ತಿಗಣೆಗಳ ಕಡಿತ.

305 ಯೌವನ
------------------
ಮದ ಮೋಹ ಮತ್ಸರ
ದ್ವೇಶಾಸೂಯೆಗಳೆಂಬ
ಕಾಡು ಪ್ರಾಣಿಗಳಿಂದ
ತುಂಬಿರುವ ವನ.

306 ಸಾಕ್ಷಿ
-----------------
ಕೃತಿ ಚೌರ್ಯವೆಸಗಿರುವ
ಕವಿ ನಾನು,
ಹೇಗಂತೀರಾ?
ಯಾರೋ ಬರೆದ
ಅಆ ದಿಂದ ಳಕ್ಷಜ್ಞ ವರೆಗಿನ
ಅಕ್ಷರಗಳನ್ನೇ ನನ್ನ ಕೃತಿಗಳಲ್ಲಿ
ಬಳಸಿಕೊಂಡಿರುವುದೇ ಸಾಕ್ಷಿ.

307 ಆತ್ಮ ಕಥೆ
----------------
ಕಲಾತ್ಮಕತೆ ಹೆಣೆದು
ಕಥೆ ಬರೆಯಬೇಕೆಂದುಕೊಂಡೆ,
ಬರೆದೆ, ನಂತರ ಓದಿದೆ,
ಕಲಾತ್ಮಕತೆಯೇನೋ ಹೊಂದಿತ್ತು
ಆದರದು ಕಥೆಯಾಗಿರದೇ
ನನ್ನಾತ್ಮ ಕಥೆಯಾಗಿಬಿಟ್ಟಿತ್ತು..

308 ಕುಂಚ
----------------
ಬಿಳಿ ಹೊಲದ ತುಂಬೆಲ್ಲಾ
ಇಂಚಿಂಚೂ ಬಿಡದಂತೆ
ಅಂಚಂಚಿಗೂ ತೆರಳಿ
ಕೊಂಚವೂ ಬೆದರದೆ
ಅಡ್ಡಾಡಿತ್ತು.

309 ಕರಾರು
--------------------
ಪ್ರಿಯಕರಾ!
ನನ್ನ ಮದುವೆಯಾದ ಮೇಲೆ
ನೀನು ಬೀರು ಬಾರಿಗೆ ಹೋಗಲು
ನನ್ನದಿಲ್ಲ ತಕರಾರು,
ಆದರೆ
ತಿಂಗಳ ಪೂತರ್ಿ ಸಂಬಳ ಮಾತ್ರ
ನನ್ನ ಕೈಗೆ ಕೊಡಬೇಕೆನ್ನುವುದೇ
ನನ್ನ ಕರಾರು.

310 ಉಳಿಸಿದ ಗಂಟು
-------------------
ನಾನವನ ಜೊತೆ ಓಡಾಡಿದ್ದಕ್ಕೆ
ಗುಟ್ಟು ಉಂಟು,
ಅಂತೆಯೇ ಬೆಳೆಸಿದೆ
ಪ್ರೇಮದಾ ನಂಟು'
ಸ್ವಲ್ಪ ದಿನದಲ್ಲಿ ಬಿತ್ತು
ನನ್ ಕೊರಳಿಗೆ ಮೂರ್ಗಂಟು,
ಅಂತೂ ಇಂತೂ ಉಳಿಸಿದೆ
ನಮ್ಮಪ್ಪನ ವರದಕ್ಷಿಣೆ ಗಂಟು.

311 ಮುತ್ತು
----------------
ಒಡಿಯಾ!
ನಿಮ್ಮ ಅಪ್ಪೋರು ಕೊಟ್ಟಿದ್ದು
ತುತ್ತಿಗಾತು,
ಅಮ್ಮೋರು ನೀಡಿದ್ದು
ಬಟ್ಟೆಗಾತು,
ನೀವು ಕೊಟ್ಟಿದ್ದು(ಮುತ್ತು) ಮಾತ್ರ
ನನ್ ಕುತ್ಗೆಗೇ ಬಂತು.

312 ಪುಸ್ತಕ
------------------
ಸಂತತಿ ಬೆಳೆಯಲು
ಸಂಗಾತಿ ಬೇಕು,
ಗ್ರಂಥಾಲಯ ಬೆಳೆಯಲು
ಪುಸ್ತಕ ಬೇಕು.

313 ಕಚೇರಿ
----------------
ತಟ್ಟಿದ್ದಕ್ಕೆ ಮುಟ್ಟಿದ್ದಕ್ಕೆಲ್ಲಾ
ಫೀಸು,
ಅದೇ ಸಕರ್ಾರಿ
ಆಫೀಸು.

314 ಸಖ್ಯ
-----------------
ರಾಜಕಾರಣಿಗಳಿಗೆ ಅಧಿಕಾರವೇ
ಮುಖ್ಯ,
ಹಾಗಾಗಿ
ಯಾವ ಪಕ್ಷದ ಜೊತೆಗಾದರೂ
ಬೆಳೆಸುತ್ತಾರೆ
ಸಖ್ಯ.

315 ಸಾಹಿತಿಯ ಪೆನ್ನು
-------------------------
ಇರಬಹುದು
ಹತ್ತು ಪೆನ್ನುಗಳು
ಸಾಹಿತಿಗಳಲ್ಲಿ,
ಆದರೆ
ಒಂದೂ ಹತ್ತವು
ಇವುಗಳಲ್ಲಿ.

316 ಹೊಟ್ಟೆ ತುಂಬಿದ ಬಳಿಕ
-----------------------
ಹಸಿದ ಹೊಟ್ಟೆಯಲ್ಲಿ
ಮಾಡುತ್ತಿದ್ದ ಹಾಗೇ ಊಟ
ಅಮೃತದಂತಹ ಸ್ವೀಟ,
ಉಂಡ ಮೇಲೆ ಕಂಠ ಮಟ
ಊಟದ ಮೇಲೆಯೇ ಬಂದಿತ್ತು
ಜಿಗುಪ್ಸೆಯ ನೋಟ.

317 ನುಸಿ ಪೀಡೆ
-----------------
ಓ ನಾರೀ........ಕೇಳ
ನೋಡಿ ಕುಡಿ
ನಾರಿಕೇಳ
ಕೀಟ ಏರೈತಿ ಬಾಳ.

318 ದರ ಏರಿದಾಗ
------------------
ಕಂಡೋರು ಕೇಳಿದೋರು
ಎಲ್ಲಾರೂ ಬೆಳಿತಾರೆ
ವೆನಿಲ್ಲಾ,
ಕದ್ದು ಕೊಂಡೋದರೆ ಮಾತ್ರ
ಏನೂ ಇಲ್ಲಾ.

319 ಪೋಷಣೆ
---------------------
ಇಂಗ್ಲೀಷಿನ
ಬೀಜ ಬಿತ್ತಿ ಹೋದವರು
ಬ್ರಿಟೀಷರು,
ಅದಕೆ ನೀರು ಗೊಬ್ಬರ ಹಾಕಿ
ಪೋಷಿಸಿದವರು
ಭಾರತೀಯರು.

320 ಪುರಸ್ಕಾರ
-----------------
ಸ್ವಾತಂತ್ರ್ಯ ಯೋಧರ
ಚಳುವಳಿ,
ಇಂದಿನ ಪೀಳಿಗೆಗದು
ಬಳುವಳಿ.

321 ಕಳ್ಳಿ (ಮಾನಸ)
---------------------
ಮೊದಲ ನೋಟದಲ್ಲಿ
ಕದ್ದಳೆನ್ನ ಮನಸು,
ಅವಳೇ
ಕೆರೆತೋಟದ ಕೂಸು.

322 ಗುಂದದ ಕುಡಿ
---------------------
ದಟ್ಟ ಕಾನನದೊಳವಿತಿರುವ
ಹೆಣ್ಣೊಂದ
ಅಭಯಾರಣ್ಯ ಗುಂದದಲಿ
ನಾ ಕಂಡೆ,
ಥಳುಕು ಬಳುಕಿನಾ
ಈ ಸುಗಂಧದ ಕುಡಿಯು
ಹಬ್ಬೂತಲಿಹುದು
ಉಂಚಳ್ಳಿಯ ಕಡೆಗೆ.

323 ಸಂಕಟ
--------
ಭಾವನೆಗಳು
ಬಾಧಿಸಿದಾಗ
ನೋವುಗಳು
ನತರ್ಿಸುತ್ತವೆ.
------------------------------------------------------------------------------------------------------ ಕವಿ-ದತ್ತಗುರು ಕಂಠಿ,
ಪೊ-ಉಂಚಳ್ಳಿ
ತಾ-ಸಿರಸಿ, ಜಿ-ಉತ್ತರ ಕನ್ನಡ, 581318. ಮೊ-9483648230.
======================================================================================================
------------------------------------------------------------------------------------------------------ - ಹನಿಗವನ ರಚನೆಕಾರ--ದತ್ತಗುರು ಕಂಠಿ.
ಪೊ- ಉಂಚಳ್ಳಿ.
ತಾ-ಸಿರಸಿ, ಜಿ-ಉತ್ತರ ಕನ್ನಡ, 581318, ಮೊ-9483648230.
======================================================================================================


ಹನಿಹವನಗಳು (ದತ್ತಗುರು ಕಂಠಿ)
-----------------------------------------------------
151 ಚಿರಂಜೀವಿ
-------------------
ಜನನವಿದೆ
ೆಮರಣವಿಲ್ಲ
ಕವಿ ಗೀಚಿದ ಕವಿತೆಗೆ,
ಸಾವಿದೆ ಕವಿಗೆ
ಸಾವಿಲ್ಲ ಕವಿತೆಗೆ.

152 ಬರ
---------------
ಮುಂಗಾರು ಮಳೆಯ ಮೇಲೆ
ಕವಿತೆ ಬರೆಯ ಹೊರಟೆ,
ಸ್ಪೂತರ್ಿಯೇ ಇಲ್ಲಾ
ಕಾರಣ
ಮಳೆಯೇ ಇರಲಿಲ್ಲ.

153 ಎಚ್ಚರಿಕೆ
---------------
ಕಪ್ಪೆ
ನಿರುಪದ್ರವಿಯೆಂದು
ಧೈರ್ಯದಿಂದ ಹೆಜ್ಜೆ ಇಡಬೇಡಿ,
ಮರೆಯಲ್ಲಿ
ಕಪ್ಪೆಯನ್ನು ನುಂಗಲು ಬಂದ
ಹಾವಿರಬಹುದು.

154 ಹೆಣ್ಣಿಗೆ
----------------
ವಾಂತಿ ಬಂದರೆ
ಶಾಂತಿಯಿಲ್ಲ.

155 ಕಾಮರ್ಿಕರು
------------------
ಬೇಸಿಗೆಯಲ್ಲಿ
ಹೆಚ್ಚು ನೀರು ಕುಡಿಯುತ್ತಾರೆ
ಆದರೂ
ಮೂತ್ರ ಬಾಧೆ ಕಡಿಮೆ ಇರುತ್ತದೆ,
ಮಳೆಗಾಲದಲ್ಲಿ
ನೀರು ಕುಡಿಯದಿದ್ದರೂ
ಒಪ್ಪತ್ತಿಗೆ ಹತ್ತಾರು ಬಾರಿ
ಮೂತ್ರಖಾನೆಗೆ ಹೋಗುವರು.

156 ಮುಂಗಾರು ಮಳೆ
------------------------
ರಣ ಬೇಸಿಗೆಯ
'ಬರ'ದ ಬೇಗೆಯಲ್ಲಿ
ಬಸವಿಳಿದ ರೈತರ ಮನಕೆ
ಹೊಂಗನಸ ಬಿತ್ತುವುದು.

157 ಸಾಲುಮರ ಮತ್ತು ರಸ್ತೆ
-------------------------
ರಸ್ತೆ ಅಂಚಿಗೆ
ಗಿಡ ನೆಟ್ಟು ಬೆಳೆಸಿದರೆ
ಮುಂದದು ಮರವಾಗಿ
ದಾರಿ ಹೋಕರಿಗೆ ನೆರಳು ನೀಡುತ್ತದೆ,
ಜೊತೆಗೆ
ಹೂವು ಕಾಯಿ ಹಣ್ಣುಗಳನ್ನೂ ನೀಡಬಹುದು,
ಆದರೆ
ಮರದಿಂದ ಬೀಳುವ
ನೀರಿನ ಹನಿಯಿಂದಾಗಿ
ರಸ್ತೆ ಮಾತ್ರ ನಾಮಾವಶೇಷಗೊಳ್ಳುತ್ತದೆ.

158 ಕವಿತೆ
------------------------
ಸಾಹಿತ್ಯೋಧ್ಯಾನದಲ್ಲಿ
ಬಾಡದ ಹೂವು
ಕವಿ ರಚಿಸಿದ ಕವಿತೆ,
ಅಲ್ಲಿ ಚಿಗುರಿನಿಂತ
ಗಿಡಗಳೇ ಕವಿಗಳು.

159 ನಾಚಿಕೆ
-----------------
ಹೆಣ್ಣಿಗೆ
ಉಸಿರಿರುವವರೆಗೂ
ಉರುಳದ ಪೇಟ.

160 ತದ್ವಿರುದ್ಧ
-----------------
ಅಂದು
ಕೆಲಸದ ವೇಳೆ
ಕೂಲಿಯ ಬೆವರಿಳಿಯುತ್ತಿತ್ತು,
ಇಂದು
ಕೂಲಿ ಕೊಡುವವನದೇ
ಬೆವರಿಳಿಯುತ್ತದೆ.

161 ಬೇ- ಸರ
-----------------
ನನಗ್ಯಾಕೋ
ಅವನ ಮೇಲೆ ಬಲು
ಬೇಸರ,
ನಾ ಮಾಡಿ ಹಾಕಿದ್ದನ್ನು
ಮೂರ್ಹೊತ್ತೂ
ಸುರಿಯುತ್ತಾನೆ
ಸರಪರ,
ಆದರೆ ನಾನು ಕೇಳಿದ್ದ
ಒಂದೇ ಒಂದು
ಚಿನ್ನದ ಸರ
ಕೊಡಿಸಲಿಲ್ಲ
ಅದೇ ಬೇಸರ.

162 ಆಶಾಜೀವಿ
------------------
ಸ್ವಾಥರ್ಿಯ ಮನಸ್ಸು
ಕುದಿಯುವ ಕುಲುಮೆ
ಆಶಾಜೀವಿಯ ಮನಸ್ಸು
ಚಿಮ್ಮುವ ಚಿಲುಮೆ.

163 ಜೋಕೆ
----------------
ಸಿಗರೇಟು ಬೀಡಿ
ಸೇವನೆಯಿಂದ
ಹೊಗೆ ಬರುತ್ತದೆ
ಮಜಾ ಸಿಗುತ್ತದೆ
ಜೊತೆಗೆ
ದಮ್ಮು ಕೆಮ್ಮೂ ಕ್ಯಾನ್ಸರೂ
ಬರುತ್ತದೆ.

164 ಕಿವುಡಿ
-----------------
ನನ್ನ ನಿರರ್ಗಳ
ಪ್ರೇಮ ಸಲ್ಲಾಪ
ನಿರಂತರ ಸಾಗಿದರೂ
ಆಕೆಗೆ ನೀರಸವಿನಿಸಲಿಲ್ಲ
ಅತಿಯಾದ
ಮಧುರ ಮಾತ್ಗಳ ಆಲಿಕೆಯಿಂದ
ಆಕಳಿಸಲಿಲ್ಲ
ಆಕೆ ಕಿವುಡಿ ಎಂಬ ವಿಚಾರ
ಮೊದಲಿಗೇಕೆ ಹೇಳಲಿಲ್ಲ
ಪ್ರೀತಿ
ಬಹುಕಾಲ ಬಾಳಲಿಲ್ಲ.

165 ಬಂಧನ
-----------------
ಮೇಲೆಂದರೆ ಆಕಾಶದಲ್ಲಲ್ಲ
ಕೆಳಗೆಂದರೆ ಪಾತಾಳದಲ್ಲಲ್ಲ
ಮಧ್ಯದ ಭೂಮಿಯ ಮೇಲೂ ಅಲ್ಲ
ಆಕೆಯ ಇರುವಿಕೆ
ಎನ್ನ ಹೃದಯ ಮಂದಿರದ
ಗೂಡಿನ ಚಿಪ್ಪೊಳಗೆ
ಬೆಚ್ಚಗೆ ಬಂಧಿಯಾಗಿದ್ದಾಳೆ.

166 ಧಾರಾವಾಹಿ
------------------
ಗಾಳೀ ಪಟ
ಹಾರಿದ ಹಾಗೇ
ನೂಲು ಜೋಡಿಸುವ
ದಾರದ ಉಂಡೆಯಂತೆ.

167 ಬೀಡಿ ಬಿಡಿ
-----------------
ಗುರುವೆಂದ
ದುವ್ರ್ಯಸನಗಳ ಬಿಡಿ,
ಶಿಷ್ಯ ಎಲ್ಲಾ ಬಿಟ್ಟು
ಬೀಡಿ
ರೂಢಿಸಿಕೊಂಡ.

168 ಆಸೆಗಳು
-------------------
ತಳವಿಲ್ಲದ ಬಾವಿಯಲ್ಲಿ
ತಾವಾಗಿಯೇ ತುಂಬಿ ಕೊಂಡಿವೆ
ಆಳದಲ್ಲಿ ಅವಿತುಕೊಂಡಿವೆ
ಕಣಕಣದಲ್ಲೂ ಬೆರೆತು ಹೋಗಿದೆ
ನರನಾಡಿಗಳಲೂ ಕಲೆತು ಹೋಗಿವೆ.

169 ಕಲಬೆರಿಕೆ
------------------
ವಿಷ ಕುಡಿದರೆ
ನಾವು ಸಾಯೋದಿರಲಿ
ಹೊಟ್ಟೆಯೊಳಗಿನ
ಜಂತೂ ಸಾಯಲಿಕ್ಕಿಲ್ಲ.

170 ಭಾವನೆ
----------------
ಆತ ಅಪರಾಧಿಯಲ್ಲ
ಅಮಾಯಕನೆಂಬುದು
ನನ್ನ ಭಾವನೆ'
ಏಕೆಂದರೆ
ಆತ ನನ್ನ
ಖಾಸಾ 'ಭಾವ'ನೇ

171 ಸ್ಮಾರಕ
----------------
ನಾನು ಬದುಕಿದ್ದಾಗ
ಹೊಲವೆಂದರೆ ಅಚ್ಚುಮೆಚ್ಚು
ಹಾಗಾಗಿ ಈಗ
ಹೊಲದಲ್ಲಿ ನಿಲ್ಲಿಸಿದ್ದಾರೆ
ನನ್ನದೇ ಬೆಚರ್ು.

172 ಮನದ ಕೊಳೆ
----------------------
ಮನೆಯ ಕಸವ
ಬಳಿಯಲು ಬೇಕು
ಕಸಬರಿಕೆ,
ಮನದ ಕೊಳೆಯ ತೊಳೆಯಲು
ಹೊರಳಬೇಕು
ಆಧ್ಯಾತ್ಮದ ಕಡೆಗೆ.

173 ಸಾಮಿಪ್ಯ
--------------
ಪ್ರತಿ ಇರುಳಲಿ
ಇನಿಯನ
ಇರುವಿಕೆಯಿದ್ದಲ್ಲಿ
ನಾರಿಯ ನರಳುವಿಕೆಯೆಲ್ಲಿ?

174 ನಗಾರಿ
----------------
ನನ್ನೆದೆಯೊಳು
ನಗಾರಿ ಭಾರಿಸುತ್ತಿದೆ
ನಾರೀ,
ನಿನ್ನ ಸೆರಗು ಬಾರಿ ಬಾರಿ
ಬೀಳುವಾಗ ಜಾರಿ.

175 ಊಹೆ
----------------
ಹೂವಿನಂತ ಮನಸ್ಸು
ಹಾವಿನಂತ ಮನಸ್ಸು
ಮನುಷ್ಯನೊಬ್ಬನಲ್ಲಿರುವುದು.

176 ಅಹಂಭಾವ
------------------
ಅಹಂಕಾರವೆಂಬ
ಶೂಲ,
ಇರಿಯುತ್ತಿದೆ
ಸ್ಥೂಲ ವರ್ಚಸ್ಸಿನ
ಶೀಲ.

177 ಕನಸು
----------------
ಒಂದೊಂದು ವಯಸ್ಸಿನಲ್ಲಿಯೂ
ಒಂದೊಂದು ಮನಸು,
ಒಂದೊಂದು ಮನಸ್ಸಿನಲ್ಲಿಯೂ
ವಿಭಿನ್ನ ಕನಸು,
ಕೆಲವು ಗೆಣಸು
ಕೆಲವು ಮೆಣಸು
ಕೆಲವು ಹೂಕೋಸು.

178 ನಿಜ
-------------
ಮನಸಿರದ
ಮನಸು
ಖಾರದಂತೆ
ಮೆಣಸು.

179 ವೃದ್ಧ
----------------
ಹರೆಯದ
ಪುಟಗಳನ್ನು
ಹರಿದು ಹಾಕಿದವ.

180 ಅಸಹ್ಯ
----------------
ಸಂತೆಗೆ ಹೋಗಲು
ಬಲು ಬೇಜಾರು,
ಕಾರಣ
ಗಬ್ಬು ನಾರುತಿದೆ
ಬಾಜಾರು.

181 ಹಣ್ಣು
--------------------
ಕಳಿತರೆ ರುಚಿ
ಅದೇ
ಕೊಳೆತರೆ ಛೀ.

182 ಹೆಂಗಸರು
---------------------
ಮೀಸೆ
ಬೇಕಾದರೂ ಬಿಟ್ಟಾರು
ಆಸೆಯನ್ನೆಂದೂ ಬಿಡರು.

183 ಅಡಿಕೆ
---------------
ಅಷ್ಟಷ್ಟು ದಿನಕ್ಕೆ
ತಿರುವಿ ಒಣಗಿಸಲು
ಮಗುಚದಿದ್ದರೆ ಮಗ್ಗಲು,
ಹೆಚ್ಚು ಹೊತ್ತು ಬೇಡ
ಮುಗ್ಗಲು.

184 ಕಾವ್ಯ ಜನನ
------------------
ಕಾವ್ಯೋದ್ಭವಕ್ಕೆ
ಪ್ರೇರಣೆಯೇ ಮೂಲ
ಕಲ್ಪನೆಯೇ ಬಾಲ.

185 ಕಾಯುವಿಕೆ
--------------------
ಕಾಯುವುದರಲ್ಲಿ
ನಿನ್ನನ್ನೇ ಮೀರಿಸಿ ಬಿಟ್ಟೇನು
ಶಬರೀ,
ಏಕೆಂದರೆ ನನ್ನ ನಲ್ಲೆ
ನಿನ್ನಂತೆ ವೃದ್ಧೆಯಲ್ಲ
ಸುಂದರಿ ಸುರಸುಂದರಿ.

186 ನಮ್ಮ ದೇಶ
-----------------
ವಿಭಿನ್ನ, ವಿಚಿತ್ರ, ವಿಶಿಷ್ಠ
ವಿನೂತನವಾದದ್ದು ನಮ್ ದೇಶ,
ಇಲ್ಲಿ ಬಡವ
ಬಡವನಾಗ್ತಾ ಹೋಗುತ್ತಾನ,ೆ
ಶ್ರೀಮಂತ
ಸಿರಿವಂತನಾಗ್ತಾ ಹೋಗುತ್ತಾನೆ,
ದುಡಿಯುವವ
ದುಡಿಯುತ್ತಲೇ ಇರುತ್ತಾನೆ,
ದುಡಿಯದವನೂ
ಆರಾಮಾಗಿರುತ್ತಾನೆ.

187 ವಿಭಿನ್ನತೆ
------------------
ಹಿಂದಿನವರಿಗೆ
ಮಕ್ಕಳೇ ಆಸ್ತಿ
ಅದನ್ನೇ ಜಾಸ್ತಿ ಮಾಡುತ್ತಿದ್ದರು,
ಈಗಿನವರಿಗೆ
ಆಸ್ತಿಯೇ ಮಕ್ಕಳು,
ಮಕ್ಕಳಿದ್ದರೂ ಇರದಿರೂ
ಮಾಡಿದ ಆಸ್ತಿಗೆ ಲೆಖ್ಖವಿಲ್ಲ.

188 ಗುದ್ದೆ
---------------
ಭತ್ತದ ಗದ್ದೆಗಳು
ರೈತರ ಪಾಲಿಗೆ
ಕಟ್ಟಿಕೊಂಡ
'ಗುದ್ದೆ'ಗಳು.

189 ಮಹಿಳೆ
----------------
ಇಳೆಗೆ
ಮಳೆ, ಬೆಳೆ, ಹೊಳೆಯೇ
ಕಳೆ,
ಮನೆಗೆ
ಮಳೆ, ಬೆಳೆ ಕಳೆ ಎಲ್ಲಾ
ಅವಳೇ.

190 ಗ್ಯಾರೆಂಟಿ
-----------------
ಕಷ್ಟದಲೂ, ನಷ್ಟದಲೂ
ಇಷ್ಟ ಹೆಜ್ಜೇ ಇಟ್ಟರೆ
ಸ್ಪಷ್ಟ ಜಯಮಾಲೆ
ನಮ್ಮ ಕೊರಳಿಗೆ.

191 ವಾಸ್ತವ
-----------------
ಕಣ್ಣು ಹಣ್ಣಾಗುತ್ತದೆ
ಮನದೊಳಗಿನ ಕಲ್ಮಶ
ಕೊಳೆತು ಹುಣ್ಣಾಗುತ್ತದೆ
ಬಣ್ಣ ಬಯಲಾಗುತ್ತದೆ
ಉರಿ ತಣ್ಣಗಾಗುತ್ತದೆ
ಮಣ್ಣೊಳಗೆ ಮಣ್ಣಾಗುತ್ತದೆ
ಮಧಾಂದನ ಮಹತ್ವಾಕಾಂಕ್ಷೆ.

192 ಆಳ
----------------
ಅವಳ
ಹೃದಯಾಂತರಾಳದಲ್ಲಿ
ನುಗ್ಗಿದಾಗಲೆಲ್ಲ
ಭಾವನೆಗಳೇ ಬಹಳ.

193 ರಸಿಕ
--------------
ಭಾವನೆಗಳು
ಬತ್ತಿ ಹೋದ
ಬರಡೆದೆಯ ಭೂಮಿಯಲ್ಲಿಯೂ
ಆಸೆಗಳ ಬೀಜ ಬಿತ್ತುವವ.

194 ವ್ಯಯ-ಸಾಯ
-----------------------
ವ್ಯವಸಾಯ
ಮಣ್ಣಿನ ಮಕ್ಕಳಿಗೆ
ವ್ಯಯ ಸಾಯವಾಗಿ
ಪರಿಣಮಿಸಿದೆ.

195 ಬೊಕ್ಕಸ
-------------------
ಧನ, ಕನಕ
ವಜ್ರ ವೈಢೂಯರ್ಾದೆಗಳಿಂದ
ತುಂಬಿಕೊಂಡಿದ್ದರೆ
ಮಾತ್ರವದು ಬೊಕ್ಕಸ,
ಬರಿದಾಗಿದ್ದರೆ ಅಲ್ಲಿರುವುದು
ಬರೀ ಕಸ.

196 ಶ್!!!
---------------
ಕಾಲು ಹಾದಿಯಲ್ಲಿ
ಒಮ್ಮೆಲೆ ಎದೆ ಧಸ್!
ಬಹುಷಃ
ಹಾದಿ ಮಧ್ಯೆ
ಹಾವೊಂದು ಭುಸ್!!!

197 ವ್ಯತ್ಯಾಸ
-----------------
ಮಂತ್ರ ಶಾಸ್ತ್ರ ಕಲಿತ ಆಕೆ
ವೈಧಿಕಳಾಗಿ
ದೇವರ ಪೂಜೆ ಮಾಡಿದರೆ
ಪೂಜಾರಿಣಿ,
ಹೀಗಿದ್ದೂ
ಅನೈತಿಕ ಚಟುವಟಿಕೆಗಳಲ್ಲಿ
ಭಾಗಿಯಾದರೆ
ಫೂ...........ಜಾರಿಣಿ.

198 ಮಂತ್ರಿಗಿರಿ ಆಕಾಂಕ್ಷಿ
----------------------
ಕೋಠಿ ರೂಪಾಯಿ
ನಿಮ್ಮ ಖಚರ್ಿಗಿರಲಿ
ಖುಚರ್ಿ ಮಾತ್ರ
ನನಗಿರಲಿ.

199 ಅಸತ್ಯ
------------------
ಹಳ್ಳಿಗರಿಗೆ
ಅಕ್ಷರ ಪಥ್ಯ
ಇದು
ಅಕ್ಷರಷಃ ಅಸತ್ಯ.

200 ನ(ಗ)ರ
--------------
ದಿನೇ ದಿನೇ ಸಮರೋಪಾದಿಯಲ್ಲಿ
ಬೆಳೆಯುತ್ತಿರಬಹುದು
ನಗರ,
ಒಂದು ನಗರ ಬೆಳೆಯಲು
ಸಾವಿರಾರು ಹಳ್ಳಿಗಳೇ
ಮೂಲ ನರ.

201 ಪೋಸ್ಟ್
-------------------
ಲೇಟಾಗಿ ಬಂದರೆ ಪೋಸ್ಟು
ಯಾರಿಗೂ ಬೇಡವಾದ ವೇಸ್ಟು
ಲಘು ಬಂದರೆ ಮಾತ್ರ ಲೇಟೆಸ್ಟು

202 ಕೂಲಿಕಾರರು
---------------------
ಮಕ್ಕಳ
ಭವಿಷ್ಯ ರೂಪಿಸಿದ
ಕೂಲಿಕಾರರು
ಭವಿಷ್ಯದ ಕಲಾಕಾರರು.

203 ಮೀಸೆ
----------------
ನವ ಯುವಕನ ಮನದಲ್ಲಿ
ಒಸರಿತ್ತು ನಿರಾಸೆ,
ಇದ ಕಂಡು
ಕುದಿಯತೊಡಗಿತ್ತು,
ಆತನ ದಷ್ಟಪುಷ್ಠ
ಮೀಸೆ.

204 ರಾಸಾಯನಿಕ ಬಳಕೆ
-------------------------
ರಾಸಾಯನಿಕ ಗೊಬ್ಬರ,ಔಷಧಿ ಬಳಸಿ
ಅಧಿಕ ಫಸಲು ತರುವುದು
ಕ್ಷಣಿಕ ಹಿತ,
ಪರಿಣಾಮ
ಮಣ್ಣಿನಲ್ಲಿ ಅಡಗಿರುವ
ಕೋಟ್ಯಾನುಕೋಟಿ
ಸೂಕ್ಷ್ಮ ಜೀವಿಗಳು ಹತ.

205 ಜ್ಞಾನ ತೃಷೆ
-----------------
ಜ್ಞಾನಾಂಮೃತವ
ತುಂಬಿಸಿಕೊಳ್ಳಿ
ಪುಸ್ತಕದಿಂದ
ಮಸ್ತಕದ ತುಂಬ.

206 ಹೊಸಗಾದೆ
----------------
ವಿದೇಶದಲ್ಲಿ
ಆಳಾಗಿ ದುಡಿ,
ಸ್ವದೇಶದಲ್ಲಿ
ಅರಸನಾಗಿ ಉಣ್ಣು.

207 ಬೆವರು
-------------------
ಮಳೆಗಾಲದಲ್ಲಿ
ಮಳೆ ಸುರಿಯೆ
ಮೈಮೇಲೆಲ್ಲ ನೀರು,
ಬೇಸಿಗೆಯಲ್ಲಿನ
ರಣ ಬಿಸಿಲಿನ ಝಳ ಬೀಳೆ
ಮೈತುಂಬಾ ಬೆವರು.

208 ಬುತ್ತಿ
-----------------
ಬರಿದಾಗಿದ್ದರೆ
ನೆತ್ತಿ,
ಗ್ರಂಥಾಲಯಕ್ಕೆ ಹೋಗಿ
ತುಂಬಿಸಿಕೊಳ್ಳಿ
ಬುತ್ತಿ.

209 ಯಾಚನೆ
---------------
ನಲ್ಲ
ನಾ ಬೇಡನಲ್ಲ,
ಆದರೂ ಯಾಚಿಸುವೆ
ನಿನ್ನಲ್ಲಿ ಮಾತ್ರ
ಪ್ರೇಮ ಭಿಕ್ಷೆ,
ನೀಡಿದರೆ ನಮ್ಮ
ಪ್ರೀತಿಗೆೆ ಶ್ರೀರಕ್ಷೆ,
ಸಂಸಾರಕೆ ನಕ್ಷೆ.

210 ಆಸೆಗಳ ಆಳ
------------------
ಬತ್ತಿದ ಭಾವನೆಗಳು
ಹೊರ ಚಿಮ್ಮಲು
ಆಸೆಗಳೇ ಬಂಡವಾಳ.

211 ದಂತಕ್ಷಯ
-------------------
ಮಿಠಾಯಿ ಅಂಗಡಿ
ಎದುರಿಗೆ ಸಾಗುವಾಗ
ಕಂದನ ಬಾಯಲ್ಲಿ
ಸುರಿವುದು ಜೊಲ್ಲು,
ಅಪ್ಪನ ಮೊಗ ಸಿಂಡರಿಸಿತ್ತು
ಕಾರಣ
ಕಂದನ ಬಾಯ್ತುಂಬಾ
ಹುಳುಕು ಬಲ್ಲು.

212 ವಿಪಯರ್ಾಸ
----------------------
ಹಟ ಮಾಡಿಕೊಂಡು
ನಾಪತ್ತೆಯಾದ ವಿಟ
ಕೊನೆಗೆ ಪತ್ತೆಯಾದ ಜಾಗ
ಮಠ.

213 ಪರಿಸ್ಥಿತಿ
----------------
ಬರೆಯಲು ಸ್ಪೂತರ್ಿ ಬಂದಾಗ
ಹಾಳೆಯಿದ್ದೂ ಪೆನ್ನಿರದಿದ್ದರೆ.........
ಯುದ್ಧಕ್ಕೆ ಹೊರಟ
ಯೋಧನ ಕೈಲಿ ಆಯುಧವಿರದಾಗ
ಉಂಟಾಗುವ ಪರಿಸ್ಥಿತಿಯೇ
ಕವಿಯದೂ ಕೂಡಾ .

214 ವಿದ್ಯೆ
---------------
ಅಕ್ಷರಾಭ್ಯಾಸ ಹೊಂದಿದರೆ
ಖಂಡಿತಾ ಮಾಯ
ಅಜ್ಞಾನದ ಗಾಯ.

215 ಅಸಡ್ಡೆಯಾದ ಕೃಷಿ
-------------------------
ಹಳ್ಳಿ ಹುಡುಗರು
ಮೊದಲಿನಂತಿಲ್ಲ
ತುಂಬಾ ಸುಧಾರಿಸಿದ್ದಾರೆ,
ಜಾಣರಾಗಿದ್ದಾರೆ
ಪೇಟೆಗೆ ಹೋಗ್ತಾರೆ
ಆಚಾರಿ, ಗಾವಡಿ,ಹೋಟೆಲ್,ಫ್ಯಾಕ್ಟರಿ,
ಈ ಎಲ್ಲಾ ಕೆಲಸಗಳನ್ನೂ ಮಾಡ್ತಾರೆ
ಕೃಷಿ ಕಾರ್ಯ ಒಂದನ್ನು ಬಿಟ್ಟು.

216 ಅಮರ
----------------
ನೀವು ಸತ್ತ ಮೇಲೂ
ಆಗಬೇಕೆ ಅಮರ,
ಹಾಗಾದರೆ
ನೆಟ್ಟು ಬೆಳೆಸಿ
ಒಂದು ಮರ.

217 ಕೀ(ರೀ)ಟ
-----------------
ರಾಜನಾದ ಬಳಿಕ
ಶಿರ ಅಲಂಕರಿಸಿದ್ದು
ರಾಜ ಕಿರೀಟ,
ಅದೇ ರಾಜನ
ತಲೆಗೆ ಹೊಕ್ಕ ಹೇನು
ರಾಜ ಕೀಟ.

218 ಕಸ ರಸ
-----------------
ಕಸದಿಂದ ರಸ ತೆಗೆವವ
ಆದಾನು ಅರಸ,
ಅದೇ ಕಸ
ಅಕ್ಕ ಪಕ್ಕದ ಮನೆ ಜನರಿಗೆ
ತಂದಿಟ್ಟಿತ್ತು ವಿರಸ.

219 ಅಳುಕು
----------------
ಬೆದರಿಸದಿದ್ದರೂ
ಬೆವರುವವನು
ತಪ್ಪೆಸಗಿದವನು.

220 ಧನದಾಹ
-----------------
ಹೆತ್ತು ಹೊತ್ತು ಸಾಕಿ ಸಲಹಿದ
ಮುದ್ದು ಮುಖದ ಕಂದನ
ಮಾರುವುದೇಕೆ ಗೊತ್ತೇ?
'ಕಂ' ಧನ.

221 ವಿಚಿತ್ರ
----------------
ಹೆಣ್ಣು ಜಾರಿದರೆ
ಜಾರಿಣಿಯೆಂಬ ಚಟ್ಟ,
ಅದೇ ಗಂಡು ಜಾರಿದರೆ
ರಸಿಕ ಮಹಾಶಯನೆಂಬ ಪಟ್ಟ.

222 ಹೆತ್ತೊಡಲು
-------------------
ಹೆತ್ತ ಮಗುವಿಗೆ
ಒಂದು ವೇಳೆ
ಜನಕನಿರದಿರೂ,
ಧನ ಕನಕವಿರದಿರೂ,
ಮಾತೃವಾತ್ಸಲ್ಯವೇ ಜನಕ
ಅದುವೇ ಆಮ್ಲಜನಕ.

223 ಮುಖವಾಡ
----------------
ನೋವು, ದುಃಖ, ಕಷ್ಟನಷ್ಟಗಳು
ಮನದಲ್ಲಿ ಮನೆ ಮಾಡಿದರೂ
ಧರಿಸದಿರು ಮನುಜಾ
ನಗು ಮುಖದ ಮುಖವಾಡ,
ಅದು ಮುಂದೆ ಮತ್ತೂ
ಸಂಕಷ್ಟದ ಆಖಾಢ.

224 ಅನಾವೃಷ್ಠಿ
----------------
ಮಳೆಗಾಲದ ಅವಧಿ
ಮಳೆ ಬರದಿರೆ ಬೇಗುಧಿ,
ಮಳೆ ವಿಪರೀತವಾದರೆ
ಹೊಲ ನೆಲವೆಲ್ಲಾ ಶರಧಿ.

225 ಕಣ್ಣೀರು
---------------
ಹೊಸದಾಗಿ ನಿಮರ್ಿಸಿದ
ಆ ಆಣೆಕಟ್ಟು ಭತರ್ಿಯಾಗಿದ್ದು,
ಹಿನ್ನೀರು ತುಂಬಿದ್ದು
ಮಳೆ ನೀರಿನಿಂದ ಮಾತ್ರವಲ್ಲ
ಮನೆ, ಮಠ, ಆಸ್ತಿಪಾಸ್ತಿ,
ತೊರೆದ ತ್ಯಾಗಿಗಳ
ಕಣ್ಣೀರೂ ಇದೆ.

226 ಹಳ್ಳೀ ಹವಾ
-----------------
ಶಹರದ ಗಾಳಿ ಸೇವಿಪಗೆ
ರೋಗ ಬರುತ್ತದೆ,
ಹಳ್ಳಿಯ ಹವಾ ಸೇವಿಪಗೆ
ಜೀವ ಬರುತ್ತದೆ.

227 ಮಳೆ
-------------
ಬಂದರೆ ವರ
ಬರದಿರೆ ಬರ.

228 ಕವಿಯೊಳಗೆ
-------------------
ಕವಿತೆ ಹುಟ್ಟುವುದು
ಸರಳ,
ಓದುಗನ ಮನ ಮುಟ್ಟುವುದು
ಮಾತ್ರ ವಿರಳ.

229 ಸಾರಾಯಿ ಸಹವಾಸ
------------------------
ಹೆಂಡ ಕುಡಿದರೆ
ಬರಬಹುದು ಮತ್ತು,
ಹೋಗುವುದು ಕಿಮ್ಮತ್ತು.

230 ಆಶಾವಾದಿ
-----------------
ಎಂದೂ ಬತ್ತಿಲ್ಲ
ಮುಂದೂ ಬತ್ತುವುದಿಲ್ಲ
ಏಕೆಂದರೆ ನಾ ಆಶಾವಾದಿ,
ನಿರಾಸೆಯ ಬೀಜ ಬಿತ್ತಿಲ್ಲ
ಕರಗಿಲ್ಲ ಆಸೆಯ ಬುತ್ತಿ
ಕನಸಿನ ಬೀಜದಲಿ ಜೊಳ್ಳಿಲ್ಲ.

231 ಕುಡಿತ
-----------------
ಪರಲೋಕಕ್ಕೆ ಧಾವಿಸುವೆ
ಸೀದಾ,
ಕುಡಿದರೆ ಸಾರಾಯಿ
ಸದಾ.

232 ಮೂಢನಂಬಿಕೆ?
-------------------
ಹೇರಳವಾಗಿ
ತುಂಬಿ ತುಳುಕಿದ್ದರೂ
ಉಗ್ರಾಣ,
ತಿನ್ನಬಾರದು ಹಿಡಿದುಕೊಂಡಾಗ
ಗ್ರಹಣ.

233 ಹಣ್ಣು
---------------
ಹಕ್ಕಿಗಳಿಗೆ
ಎಂದು ತಪ್ಪದು ಬುತ್ತಿ,
ಹೇಗೆಂದರೆ
ನೆಟ್ಟು ಬೆಳೆಸಿರುವೆ
ತೋಟದ ಸುತ್ತಲೂ 'ಅತ್ತಿ'

234 ನಂಬಿಕೆ
----------------
ಆರದ್ರಾ ಮಳೆ
ಆರದೇ ಹೊಯ್ದರೆ
ಬೆಳೆ ಕಳೆ ಭದ್ರ,
ಆರಿ ಆರಿ ಹೊಯ್ದರೆ
ಆ ಬಾರಿ ಅದ್ರ.

235 ಸನ್ಮಾನ?
----------------
ಸದಾ ಸೇವಿಸಿದರೆ
ಸಾರಾಯಿ,
ಸ್ವಾಗತಿಸುತ್ತದೆ
ಯಮರಾಯನ ಆಸ್ಥಾನದಲ್ಲಿ
ಹಾರ ತುರಾಯಿ.

236 ಚಿಂತೆ
-----------------
ಲವಲವೇಶವೂ
ಚಿಂತೆ ಇರದ ಮನ
ಅರಳುತಿರುವ ಕುಸುಮ,
ಚಿಂತೆ ಆವರಿಸಿದರೆ
ಹೃದಯ ಚಿತೆಯಂತೆ
ಭಸ್ಮ .

237 ಅವ-ಲಕ್ಕಿ
----------------
ನೆರೆ ಸಂತ್ರಸ್ತರ ಪೈಕಿ
ಎಲ್ಲರಿಗಿಂತ ಆತ ಬಹಳ
ಲಕ್ಕಿ,
ಪರಿಹಾರ ವಿತರಣೆಯ ವೇಳೆ
ಬಚ್ಚಿಟ್ಟುಕೊಂಡು ಬಿಟ್ಟಿದ್ದ
ಒಂದು ಮೂಟೆ ಅವಲಕ್ಕಿ.

238 ವೆನಿಲ್ಲಾ
----------------
ಮಾಡಲು ತಿಳಿಯದವ
ಪರಾಗ ಸ್ಪರ್ಶ,
ಅವನು ವೆನಿಲ್ಲಾ ಸಂಕುಲಕ್ಕೆ
ಅಸ್ಪರ್ಶ.

239 ಮಾಡಿದುಣ್ಣೋ.........
---------------------
ಸಸಾರ ಪ್ರಶ್ನೆ ಕೇಳಿರೆಂದು
ಮೇಸ್ಟ್ರಿಗೇ ಹಾಕಿದ್ದ
ದಮಕಿ,
ಆ ಪೋರ
ಪರೀಕ್ಷೆಯಲ್ಲಿ ಹೊಡೆದ
ಡುಮಕಿ.

240 ಪಂಚರ್
------------------
ಮಧ್ಯ ಹಾದಿಯಲ್ಲಿ ನಿಂತರೆ
ಚಲಿಸುತ್ತಿರುವ ಬಸ್
ಬಹುಷಃ ಅಂದಿರಬೇಕು
ಟಾಯರಿನ ಗಾಳಿ ಟುಸ್.

241 ಢಾಂಬಿಕತೆ
--------------------
ನಾಸ್ತಿಕತೆ,ಆಸ್ತಿಕತೆಗಳಿಗೆ
ಎಲ್ಲಿದೆ ವಾಸ್ತವಿಕತೆ?
ಎಲ್ಲಿದೆ ಸಮನ್ವಯತೆ?
ಎಲ್ಲಾ ಬರಿ ಢಾಂಬಿಕತೆ.

242 ವೈಮನಸ್ಯ
------------------
ಮುನಿಸಿಕೊಂಡಾಗ
ಮಡದಿ,
ನಾ ಬಳಲಿ ಬೆಂಡಾಗುವೆ
ವಿರಹದಿ.

243 ರಾಮಬಾಣ
---------------------
ಆತ ಮುನಿಸಿಕೊಂಡಾಗ
ಗರಿಗೆದರುವುದು
ಆಕೆಯ ವೈಯ್ಯಾರ ಬಿನ್ನಾಣ,
ಆತನ ಗಂಟು ಮೊಗವ
ನಗಿಸಲದೇ ರಾಮಬಾಣ.

244 ಸಾಕಣೆ
----------------
ನಾನು ಸಾಕಿದ್ದು
ಎರಡು ಕರುಗಳನ್ನು
ಎರಡು ವರ್ಷ,
ಅವು ಹಸುಗಳಾಗಿ
ಎಂಟು ಜನರನ್ನು
ಎಂಟು ವರ್ಷ
ಸಾಕಿದವು.

245 ವಾಸ್ತವ
----------------
ನಲ್ಲೇ
ನೆಚ್ಚಿಕೊಂಡಿದ್ದರೆ
ನಿನ್ನ ಅಧರ,
ತುಂಬುವುದಿಲ್ಲ
ನಮ್ಮ ಉದರ.

246 ವ್ಯವಧಾನ
----------------
ವ್ಯವಸಾಯಕ್ಕೆ ಬೇಕು
ವ್ಯವಧಾನ,
ಅನುಭವವಿರದಿರೆ
ಆಗುವುದು ಅಧ್ವಾನ.

247 ವ್ಯತ್ಯಾಸ
---------------
ಚುನಾವಣೆಗೆ ಮುನ್ನ
ರಾಜಕಾರಣಿಗಳಿಗೆ
ಮತದಾರನೇ ದೇವರು,
ನಂತರ ಮತದಾರನಿಗೆ
ವಿಜೇತ ಅಭ್ಯಥರ್ಿಯೇ ದೇವರು.

248 ನಿಧಿ
--------------
ಮೌನ, ಮಾನವತೆ
ಮಾನವನಿಗೆ
ಇರಬೇಕಾದ
ಮಹಾ ನಿಧಿ.

249 ಓದುಗರು
----------------
ಪುಸ್ತಕ
ವಿದ್ಯಾವಂತನಿಗೆ
ಅತ್ಯಾಪ್ತ ಸಂಗಾತಿ,
ಓದುಗರಿರದಿರೆ
ಪುಸ್ತಕದ ಸಂತತಿಗೆ
ಒದಗುವುದು ಅವನತಿ.

250 ಯಜಮಾನ
-----------------
ಮನೆ ಮಂದಿಯ
ಕಷ್ಟ ನಷ್ಟ
ನೋವು ನಲಿವುಗಳಲ್ಲಿ
ಪಾಲುದಾರಿಕೆಯ ಬಾದ್ಯತೆ
ವಹಿಸಿಕೊಳ್ಳುವವನಿಗಿದೆ
ಸಂಸಾರದ ಸೂತ್ರಧಾರನಾಗುವ
ಅರ್ಹತೆ.

251 ಚಹರೆ
-----------------
ಅವಳ ಮೊಗ
ತುಸು ಕಪ್ಪು
ಹಾಗಾಗಿ ಮಾಡಿಕೊಳ್ಳುವಳು
ಮೇಕಪ್ಪು.

252 ಕನ್ನ
---------------------
ರನ್ನ, ಚಿನ್ನ ಎಂಬ
ಮುದ್ದಿನಿಂದ ಇಟ್ಟ ಹೆಸರೇ
ಮುಳುವಾಯಿತಲ್ಲ!
ಮಗಳ ಮಾವನ ಮಗ ಮದನ
ಹಾಕಿ ಬಿಟ್ಟ ಕನ್ನ.

253 ಅಪರಾಧಿ
------------------
ಅಂಜದೆ ಅಳುಕದೆ
ತಿರುಚಿರಿ ಅವನ ಕೈಕಾಲು,
ಕಾನೂನನ್ನೇ ತಿರುಚುವುದಾಗಿತ್ತು
ಅವನ ಅಹವಾಲು.

254 ವಿರಕ್ತಿ
------------------
ಬದುಕಿನ ನೋವು,
ದುಃಖ,ನಷ್ಠಗಳನ್ನು
ಎದುರಿಸಲಾಗದ ಹೇಡಿಗೆ
ನುಣುಚಿಕೊಳ್ಳಲು ಒಂದು ಯುಕ್ತಿ.

255 ಪರಿತಪಿತ
----------------
ಕಸಬರಿಕೆಯಿದ್ದೂ
ಗುಡಿಸಲಾಗಲಿಲ್ಲ,
ಮನದೊಳು ಮನೆಮಾಡಿದ
ಕಲ್ಮಶಗಳ ರಾಶಿಯ.

256 ಕೇಶರಾಶಿ
------------------
ಹೇನು, ಹೈರಣೆ, ಹೊಟ್ಟುಗಳು
ಅಡಗಿದ್ದರೆ ಅದು
ಕ್ರಿಮಿಕೀಟಗಳ ಕೂಟ,
ಜಾಜಿ, ಮಲ್ಲಿಗೆ, ಸಂಪಿಗೆ
ಮುಡಿದಿದ್ದರೆ
ಹೂವಿನ ತೋಟ.

257 ಕವಿಗೆ
----------------
ಅವನು ಆರೋಗ್ಯದಿಂದಿದ್ದರೆ
ಸೌಖ್ಯ,.
ಹೃದಯಾಂತರಾಳದ ಶೆಲೆಯಿಂದ
ಒಸರಿ ಬರಬಹುದು
ಕಲಾತ್ಮಕ ವಾಕ್ಯ.

258 ಕವನ
----------------
ನೋವು ನಲಿವಿಗಳಿಗೆ
ತಾಯಿ ಬೇರು,
ಆದರೆ ಆಲಿಸಲು
ಬಲು ಬೋರು.

259 ಬೆಳವಣಿಗೆ
--------------------
ಕನ್ನಡದ ಅಸ್ಥಿತ್ವ
ಗುರುತಿಸಿದರದೇ
ಕನ್ನಡಮ್ಮನ ಸ್ವಾಸ್ಥ್ಯ .

260 ಸಕರ್ಾರಿ ಕಚೇರಿ
--------------------
ಕೇವಲ ಸಿಕ್ಕಾ ಹಾಕೋಕೂ
ತಗೋತಾರಲ್ಲ ಶುಲ್ಕ,
ಆ ಜನರ ಗುಣ
ಬಾಳಾ ಹಲ್ಕಾ.

261 ಕಾವ್ಯ ಜನನ
-----------------
ನಾಡಿನವಕೆ ಹೆದರಿ
ಕಾಡಿನಲ್ಲಿ ಅವಿತೆ,
ಆಗ ಮನದಿ ಮೂಡಿ ಬಂತು
ಒಂದಿಷ್ಟು ಕವಿತೆ.

262 ಪಲಾಯನವಾದಿ
----------------------
ಮಾಡದವ
ಹೊಲ ಮನೆ ದನಕರುಗಳ
ಚಾಕರಿ,
ಮಾಡ ಬಯಸುತ್ತಾನೆ
ಮೈ ಮುರಿದು ದುಡಿಯದ
ಬೆವರ ಹನಿ ಇಳಿಯದ
ನೌಕರಿ.

263 ವ್ಯಾಟ್
-----------------
ಈ ಒಪ್ಪಂದದಿಂದ
ಪ್ರತೀ ವಸ್ತುಗಳ ಮೇಲೂ
ವಿಧಿಸುವರಂತೆ ಕರ,
ಇವರಿಗೆ
ಜನಸಾಮಾನ್ಯರ ಮೇಲೆ
ಒಂದಿನಿತೂ ಇಲ್ಲವೇ
ಕನಿಕರ?

264 ಜಾತ್ಯಾತೀಯತೆ
-----------------------
ವಿವಿಧ ಜಾತಿ ಧರ್ಮಗಳ
ಕೂಡಿಸಿ ಬೆಸೆದರೆ ಕಸಿ,
ಭಾರತದ ಜನತೆಯೆಂದರೆ
ಅದೆಷ್ಟು ಖುಷಿ.

265 ಬೆಡ್ ರೆಸ್ಟ್
----------------
ಶಾಂತಿ ಸಮಾಧಾನ ನೆಮ್ಮದಿ
ನೀಡದ ಶ್ರೀಮಂತಿಕೆ
ಇದ್ದರೆಷ್ಟು ಬಿಟ್ಟರೆಷ್ಟು
ರೋಗ ಬಂದರೆ
ಪ್ರಾಯದಲ್ಲಿಯೇ
ಬ್ರೆಡ್ಡೂ-ರೆಸ್ಟೂ.........

266 ಅಲಂಕಾರ
--------------
ಹದ್ದು ಬಸ್ತಿನಲ್ಲಿ
ಇಟ್ಟುಕೊಂಡರೆ
ಅಹಂಕಾರ,
ಅದೇ
ಮನುಷ್ಯನ ನಿಜವಾದ
ಅಲಂಕಾರ.

267 ಸ್ಪಧರ್ೆಯಲ್ಲಿ
----------------
ಗೆದ್ದವನಿಗೆ
ಹೊಗಳಿಕೆಯೆಂಬ
ಪಟ್ಟ,
ಪಾಪ
ಸೋತವನ ಮುಖ ಮಾತ್ರ
ಸೊಟ್ಟ.

268 ಅಧ್ವಾನ
----------------
ಹಿಂದೂಸ್ತಾನದ
ಅಡ್ವಾಣಿ,
ಪಾಕಿಸ್ತಾನದಲ್ಲಿ
ಅಡ್ಡ-ವಾಣಿಿ .

269 ಹೊಸದು
----------------
ಅಂಗಡಿಯಲ್ಲಿ
ದರ ಹೆಚ್ಚಾದರೂ
ಹೊಸದು,
ಅದೇ ಪುಟ್ಬಾತ್ ನಲ್ಲಿ
ಅರ್ಧ ದರಕ್ಕೆ ಕೊಂಡದ್ದು
ಮಾತ್ರ ಹೊಸದ್ದು.

270 ಸೋಲು ಗೆಲುವು
---------------------
ಸೋತವರಿಗೆ
ಇದ್ದೇ ಇದೆ
ಗೆಲುವಿನಾ ಘಟ್ಟ,
ಗೆಲುವಿನ ಅಮಲೇರಿದವರಿಗೆ
ಕಟ್ಟಿಟ್ಟ ಬಿತ್ತಿ
ಸೋಲೆಂಬ ಚಟ್ಟ.

271 ಅಂಜಿಕೆ
---------------
ಬಣ್ಣಕ್ಕಿದೆ
ಮಾಸುವ ಅಂಜಿಕೆ,
ಬಣ್ಣ ಬಣ್ಣದ ಕನಸಿಗೆ
ಹೊಂಗನಸಿಗೆ
ಯಾವ ಬೆದರಿಕೆ?

272 ಮನಸ್ಸು
------------------
ಕನಸಿಗೂ ಮನಸಿಗೂ
ಅವಿನಾಭಾವ ಸಂಬಂಧ,
ಒಳ್ಳೆಯ ಮನಸಿಗೆ
ಸುಂದರ ಕನಸು
ಒಲ್ಲದ ಮನಸಿಗೆ
ಬೀಳಲಿದೆ
ಕೆಟ್ಟ ಕನಸು.

273 ಕಲಿಗಾಲ
-----------------
ನಂಬಿಪನ
ನಿಂದಿಪನು
ದುಷ್ಟ,
ನಿಂದಿಪನ
ನಂಬುವುದು ಕಷ್ಟ.

274 ಮರಳಿ ಮಣ್ಣಿಗೆ
---------------------
ಅಧಿಕಾರ, ಪ್ರತಿಷ್ಠೆ,
ಧನ ಕನಕಗಳೊಡೆಯನು
ರಾಜವೈಭೋಗ
ಕಂಡರೂ ಕಣ್ಣಿಗೆ,
ಮುಂದೆ
ತೆರೆಯ ಮರೆ ಸರಿದಾಗ
ಎಲ್ಲಾ ನುಣ್ಣಗೆ
ಮರಳಲೇ ಬೇಕು
ಮಣ್ಣಿಗೆ.

275 ನದಿ ಮತ್ತು ಮನಸ್ಸು
-----------------------
ಇವೆರಡೂ ಹರಿಯುತ್ತವೆ,
ಕೆಟ್ಟ ಮನಸ್ಸು
ಇರಿಯುತ್ತದೆ,
ಬರಗಾಲದಿ
ನದಿ ಬಿರಿಯುತ್ತದೆ.

276 ಭೀತಿ
--------------
ಕನಸು ಕಾಣಲು
ಕಾಸಿಲ್ಲ ನಿಜ,
ಒತ್ತಾಸೆಯ ಕನಸುಗಳಿಗ
ಕಲಸು ಮೇಲೋಗರವಾಗುವ
ಭೀತಿ.

277 ಮಧ್ಯವತರ್ಿಗಳು
--------------------
ಬಂದಾಗ
ಹೊಸ ವಸ್ತು
ಮಾರುಕಟ್ಟೆಗೆ,
ಅಲ್ಪ ಸ್ವಲ್ಪ ಮಾತ್ರವೇ
ಉತ್ಪಾದಕರ ತಟ್ಟೆಗೆ
ಅವರ ಹೊಟ್ಟೆ ಬಟ್ಟೆಗೆ,
ಉತ್ಪಾದನೆಯ ಬಹುಪಾಲು ಲಾಭಾಂಶ
ದಲ್ಲಾಳಿಗಳ ಪೆಟ್ಟಿಗೆಗೆ.

278 ನೆಗಡಿಗೆ ಮೂಲ
--------------------
ಎಳೆ ಸೌತೆಕಾಯಿ ಹಶಿ
ಅಂದ್ರೆ ನನಗೆ ಬಹಳ ಖುಷಿ,
ತಿಂದ ಮಾರನೇ ದಿನ
ಮೂಗು ತುಂಬಾ ಆ.....ಕ್ಷಿ.

279 ಕಂಪು
-----------------
ಕುಸುಮ
ಕಾಡಿನಲ್ಲಿ ಅರಳಿದರೂ
ನಾಡಿನಲ್ಲಿ ಅರಳಿದರೂ
ಕುಂದುಂಟಾಗದು
ಸುವಾಸನೆಗೆ.

280 ಫಸಲು
----------------
ಕನಸು ಕಾಣಲು
ಕಂಜೂಸಿತನವೇಕೆ?
ಕವಿಗೂ ಒಂದೇ
ಕಾಮರ್ಿಕನಿಗೂ ಒಂದೇ
ಕನಸು
ನಿದ್ದೆ ಬಲ್ಲವನ
ಭರಪೂರ ಫಸಲು.

281 ದಾಳಿಕೋರರು
-----------------------
ತುಂಬಬೇಕು
ದಾಳಿಕೋರರ ಜೋಳಿಗೆ,
ಅದಿಲ್ಲವಾದರೆ
ಶುರುಮಾಡಿಬಿಡುವರು
ನ್ಯಾಯ-ಅನ್ಯಾಯದ ವಿರುದ್ಧ
ದಾಳಿಗೆ.

282 ಪರಿಣಾಮ
------------------
ತಿಂದರೆ
ವಯಾಗ್ರಾ,
ದೂರವಾದೀತು
ವೈರಾಗ್ಯ.
ಹಾಗೇ ದೂರವಾಗುವುದು
ಆರೋಗ್ಯ.

283 ಪರಿವರ್ತನೆ
-------------------
ಹಿಂದೆ
"ಏ ಬಾರೋ ನಮ್ಮನೆ ಕೆಲಸಕ್ಕೆ"
"ಬಂದೇ ಬಿಟ್ಟೆ ಒಡೆಯಾ"
ಇಂದು
"ಸ್ವಲ್ಪ ಕೆಲಸವಿತ್ತು.ನಾಳೆ ಬಿಡುವಿದೆಯೆ?"
"ನಮ್ಮನೆ ಕೆಲಸ ನೀವು ಮಾಡುವಿರಾ?"

284 ಹುಳುಕು
----------------
ರಾಯರು
ಪಕ್ಕದ ಮನೆಯ
ಶುಭಕಾರ್ಯಕ್ಕೋಸ್ಕರ
ತಮ್ಮನೆಯ
ಅಂಗಳ, ಕೊಠಡಿ,ಬಚ್ಚಲು, ಪಾಯಖಾನೆಗಳನು
ಬಿಟ್ಟು ಕೊಟ್ಟಿದ್ದರು,
ಆದರೆ
ತಮ್ಮ ಮನೆ ಕಾಂಪೌಂಡಿನೊಳಗೆ
ನಾಯಿಯನ್ನು ಮಾತ್ರ ಕಟ್ಟಿ ಹಾಕಲು
ಮರೆತಿದ್ದರು.

285 ರೈತ
-----------------
ದಿನವಿಡೀ
ನೀರು ಕುಡಿದರೂ
ಉಚ್ಚೆ ಹೊಯ್ಯುವುದೇ
ಅಪರೂಪ.

286 ಕೃಷಿಕನ ಜೋಡು
---------------------
ದಾರಿಯಲ್ಲಿ ಸಾಗುವಾಗ
ಕಾಲಿಗೆ
ಕಲ್ಲು ತಾಗುತ್ತದೆಂದು
ರೈತನ ಚಪ್ಪಲಿ
ಹಾಕಿಕೊಂಡೀರಿ ಜೋಕೆ,
ಅವನ ಜೋಡಿಗೆ
ಚುಚ್ಚಿಕೊಂಡಿರಬಹುದು
ಹತ್ತಾರು ಮುಳ್ಳುಗಳು.

287 ರಭಸ
----------------
ಬಲಿತ ಬಾಲೆಗೆ
ರಭಸದ ಬಯಕೆ,
ಛೇಧಿಸಿ ಬಂದೀತು
ಅವಳುಟ್ಟ ಬಿಗಿ ರವಿಕೆ.

288 ಮನುಜನ ಮನಸ್ಸು
-------------------------
ಬೆಳಕು ಹೋಗದ ಕಡೆ
ಗಾಳಿ ನುಸುಳಬಹುದು,
ಗಾಳಿ, ಬೆಳಕು ಸಾಗದ ಕಡೆ
ನೀರು ಒಸರಬಹುದು,
ಈ ಮೂರೂ ಹೋಗದ ಜಾಗಕ್ಕೆ
ಸಾಗುತ್ತದೆ
ಮನುಜನ ಮನಸ್ಸು.

289 ಮೌನ ಮಾತಾಗಲು
-------------------------
ಬಯಕೆಗಳು
ಬಿರಿಯಬೇಕು.
ಆಸೆಗಳು
ಚಿಮ್ಮಬೇಕು,
ಕನಸುಗಳು
ಕರೆಯಬೇಕು
ಮನಸುಗಳು
ಒಂದಾಗಬೇಕು
ಆಗ ಮೌನ ಮುರಿಯುತ್ತದೆ.

290 ರೈತ-ನಕ್ಷತ್ರ
------------------
ಪ್ರಪಂಚಕ್ಕೆ
ನಿಜವಾದ ಸೂರ್ಯ
ರೈತ,
ಜಗತ್ತು ಅವನನ್ನು ನೋಡುತ್ತಿರುವುದು
ನಕ್ಷತ್ರವಾಗಿ
ಮಿಣುಕು ಹುಳುವಾಗಿ.

291 ಪ್ರೇಮಿಗೆ
----------------
ಚಂದಿರನ ಹಂದರದೊಳು
ಮಂದಿರವ ನಾ ಕಾಣೆ
ಎನ್ನ ಹೃದಯ ಮಂದಿರದೊಳು
ರೂಪಾಯಿಗೆ ನೀ ಹದಿನಾರಾಣೆ.

292 ಮರೀಚಿಕೆ
-----------------
ಆಗ ಆ ಬಾಲಿಕೆ
ನನಗೆ ಕಾವ್ಯ ಕನ್ನಿಕೆ
ನಂತರ ಆಕೆ,ನನ್ನಾಕೆಯಾಗಿ
ನನ್ನ ಆಯ್ಕೆ
ಈಗ ನನಗೆ ಕಾವ್ಯ
ಮರೀಚಿಕೆ.

293 ಕವಿತೆ
----------------
ಒಳ್ಳೊಳ್ಳೆ ಹೂಗಳ
ಕೊಯ್ದು ಆಯ್ದು
ಒಂದೊಂದಾಗಿ ಪೋಣಿಸಿ
ಹೂ ಮಾಲೆ ಕಟ್ಟುವಂತೆ
ಕಟ್ಟುವನು ಕವಿ.

294 ಆಸೆ
-----------------
ಅಂದು
ದಿಗಂತದಲ್ಲಿ ಹಾರಾಡುವ ಆಸೆಯಿತ್ತು
ಜೀವಂತವಾಗಿದ್ದಾಗ,
ಇಂದು
ದಿಗಂತದಲ್ಲಿ ಹಾರಾಡುತ್ತಿದ್ದೇನೆ
ದಿವಂಗತನಾಗಿ,
ಆದರೆ ಈಗ
ಭೂಮಿಯ ಮೇಲೆ
ನಡೆದಾಡುವ ಆಸೆಯಾಗಿದೆ
ಭುವಂಗತನಾಗಿ.

295 ಹಣೆ ಬರಹ
---------------------
ಬದಲಾಯಿಸಿದೆ ಮನೆಯ ಮಡದಿಯ
ಬದಲಾಯಿಸಿದೆ ಮನಸ ಕನಸ
ಬದಲಾಯಿಸಿದೆ ಉಡುಗೆ ತೊಡುಗೆ
ಬದಲಾಯಿಸಿದೆ ಭಗವಂತನ
ಆದರೆ ಬದಲಾಯಿಸಲಾಗಲಿಲ್ಲ
ನನಗೆ ನನ್ನ ಹಣೆ ಬರಹವ.

296 ಆಗ-ಈಗ
-------------------
ಅಡಿಕೆಗೆ ಹೋದ ಮಾನ
ಆನೆ ಕೊಟ್ಟರೂ ಬರದು
ಅಡಿಕೆ ರೇಟು ನೋಡಿ
ಕೊಂಡ ಸಾಲ ಈಗ
ತೋಟ ಮಾರಿದರೂ ತೀರದು.

297 ಸಾರ
----------------
ಸಕ್ಕರೆಯ ಸಿಹಿ ಇರುವುದು
ಕಬ್ಬಿನ ರಸದಲ್ಲಿ,
ಸಂಸಾರದ ಸಾರ ಉಳಿವುದು
ಸಮರಸದಲ್ಲಿ.

298 ಅಡಿಕೆ ಜ್ವರ
------------------
ಕೊಂಚ ಏರಿದರೂ
ಅಡಿಕೆ ದರ
ಇಳಿವುದು ಅಡಿಕೆ
ಬೆಳೆಗಾರನಿಗೆ ಬಂದ ಜ್ವರ.

299 ರೈತ
----------------
ಸಾಲದಲ್ಲಿಯೇ ಹುಟ್ಟಿ
ಸಾಲದಲ್ಲಿಯೇ ಬೆಳೆದು
ಸಾಲದಲ್ಲಿಯೇ ಸಾಯುವವನಿಗೆ
ರೈತನೆಂದು ಕರೆಯಬಹುದು.

300 ವೆನಿಲ್ಲಾ
----------------
ಏ ನೀಲಾ! ಏ ನೀಲಾ !
ಎಂದು ಕೂಗದಿರು ನಲ್ಲಾ
ವೆನಿಲಾ! ವೆನಿಲಾ!
ಅಂದುಕೊಂಡು
ಮುತ್ತಿಬಿಟ್ಟಾರು ಎಲ್ಲಾ.

301 ತಿಳಿಯದಿರಲಿ
---------------------
ನಾ ಮೆಚ್ಚಿದ್ದು
ಅವಳ ಕೇಶ ರಾಶಿ ನೋಡಿ ಅಲ್ಲ,
ರೂಪ ರಾಶಿ ನೋಡಿ ಅಲ್ಲ
ರೂಪಾಯಿ ರಾಶಿ ನೋಡಿ.

302 ಕಾಮರ್ೋಡ
--------------------
ಕಾರು ಕಾರುತ್ತ
ಹೋಗುವುದು ಮುಂದೆ
ಕಾರಿದ್ದು ಹಾರುತ್ತ
ಹೋಗುವುದು ಮೇಲೆ
ಅದುವೆ ಕಾರ್ಮೋಡ.

303 ದೇವರ ನಾಮ
---------------------
ದಿ ಪೂತರ್ಿ ದುಡಿಯುವವನ
ಯೋಗ್ಯತೆ ಚೆಂದ
ರೆಂಬೆ ಕೊಂಬೆಗಳ ತುಂಬಾ ಎಲೆಗಳಿರುವ
ಮರ ಚೆಂದ
ಬಾಯಿ ತುಂಬಾ ಭಜಿಸಲು
ದೇವರ ನಾಮ ಅಂದ.

304 ತಿಗಣೆಗಳು
-----------------
ಸಕರ್ಾರಿ ಆಫೀಸುಗಳಿಗೆ ಹೋದರೆ
ಅಲ್ಲಿರುವುದು
ಬರೀ ಕಾಗದ ಪತ್ರಗಳ ಕಡತ
ಬಿಟ್ಟರೆ
ರಕ್ತ (ಲಂಚ) ಹೀರುವ
ತಿಗಣೆಗಳ ಕಡಿತ.

305 ಯೌವನ
------------------
ಮದ ಮೋಹ ಮತ್ಸರ
ದ್ವೇಶಾಸೂಯೆಗಳೆಂಬ
ಕಾಡು ಪ್ರಾಣಿಗಳಿಂದ
ತುಂಬಿರುವ ವನ.

306 ಸಾಕ್ಷಿ
-----------------
ಕೃತಿ ಚೌರ್ಯವೆಸಗಿರುವ
ಕವಿ ನಾನು,
ಹೇಗಂತೀರಾ?
ಯಾರೋ ಬರೆದ
ಅಆ ದಿಂದ ಳಕ್ಷಜ್ಞ ವರೆಗಿನ
ಅಕ್ಷರಗಳನ್ನೇ ನನ್ನ ಕೃತಿಗಳಲ್ಲಿ
ಬಳಸಿಕೊಂಡಿರುವುದೇ ಸಾಕ್ಷಿ.

307 ಆತ್ಮ ಕಥೆ
----------------
ಕಲಾತ್ಮಕತೆ ಹೆಣೆದು
ಕಥೆ ಬರೆಯಬೇಕೆಂದುಕೊಂಡೆ,
ಬರೆದೆ, ನಂತರ ಓದಿದೆ,
ಕಲಾತ್ಮಕತೆಯೇನೋ ಹೊಂದಿತ್ತು
ಆದರದು ಕಥೆಯಾಗಿರದೇ
ನನ್ನಾತ್ಮ ಕಥೆಯಾಗಿಬಿಟ್ಟಿತ್ತು..

308 ಕುಂಚ
----------------
ಬಿಳಿ ಹೊಲದ ತುಂಬೆಲ್ಲಾ
ಇಂಚಿಂಚೂ ಬಿಡದಂತೆ
ಅಂಚಂಚಿಗೂ ತೆರಳಿ
ಕೊಂಚವೂ ಬೆದರದೆ
ಅಡ್ಡಾಡಿತ್ತು.

309 ಕರಾರು
--------------------
ಪ್ರಿಯಕರಾ!
ನನ್ನ ಮದುವೆಯಾದ ಮೇಲೆ
ನೀನು ಬೀರು ಬಾರಿಗೆ ಹೋಗಲು
ನನ್ನದಿಲ್ಲ ತಕರಾರು,
ಆದರೆ
ತಿಂಗಳ ಪೂತರ್ಿ ಸಂಬಳ ಮಾತ್ರ
ನನ್ನ ಕೈಗೆ ಕೊಡಬೇಕೆನ್ನುವುದೇ
ನನ್ನ ಕರಾರು.

310 ಉಳಿಸಿದ ಗಂಟು
-------------------
ನಾನವನ ಜೊತೆ ಓಡಾಡಿದ್ದಕ್ಕೆ
ಗುಟ್ಟು ಉಂಟು,
ಅಂತೆಯೇ ಬೆಳೆಸಿದೆ
ಪ್ರೇಮದಾ ನಂಟು'
ಸ್ವಲ್ಪ ದಿನದಲ್ಲಿ ಬಿತ್ತು
ನನ್ ಕೊರಳಿಗೆ ಮೂರ್ಗಂಟು,
ಅಂತೂ ಇಂತೂ ಉಳಿಸಿದೆ
ನಮ್ಮಪ್ಪನ ವರದಕ್ಷಿಣೆ ಗಂಟು.

311 ಮುತ್ತು
----------------
ಒಡಿಯಾ!
ನಿಮ್ಮ ಅಪ್ಪೋರು ಕೊಟ್ಟಿದ್ದು
ತುತ್ತಿಗಾತು,
ಅಮ್ಮೋರು ನೀಡಿದ್ದು
ಬಟ್ಟೆಗಾತು,
ನೀವು ಕೊಟ್ಟಿದ್ದು(ಮುತ್ತು) ಮಾತ್ರ
ನನ್ ಕುತ್ಗೆಗೇ ಬಂತು.

312 ಪುಸ್ತಕ
------------------
ಸಂತತಿ ಬೆಳೆಯಲು
ಸಂಗಾತಿ ಬೇಕು,
ಗ್ರಂಥಾಲಯ ಬೆಳೆಯಲು
ಪುಸ್ತಕ ಬೇಕು.

313 ಕಚೇರಿ
----------------
ತಟ್ಟಿದ್ದಕ್ಕೆ ಮುಟ್ಟಿದ್ದಕ್ಕೆಲ್ಲಾ
ಫೀಸು,
ಅದೇ ಸಕರ್ಾರಿ
ಆಫೀಸು.

314 ಸಖ್ಯ
-----------------
ರಾಜಕಾರಣಿಗಳಿಗೆ ಅಧಿಕಾರವೇ
ಮುಖ್ಯ,
ಹಾಗಾಗಿ
ಯಾವ ಪಕ್ಷದ ಜೊತೆಗಾದರೂ
ಬೆಳೆಸುತ್ತಾರೆ
ಸಖ್ಯ.

315 ಸಾಹಿತಿಯ ಪೆನ್ನು
-------------------------
ಇರಬಹುದು
ಹತ್ತು ಪೆನ್ನುಗಳು
ಸಾಹಿತಿಗಳಲ್ಲಿ,
ಆದರೆ
ಒಂದೂ ಹತ್ತವು
ಇವುಗಳಲ್ಲಿ.

316 ಹೊಟ್ಟೆ ತುಂಬಿದ ಬಳಿಕ
-----------------------
ಹಸಿದ ಹೊಟ್ಟೆಯಲ್ಲಿ
ಮಾಡುತ್ತಿದ್ದ ಹಾಗೇ ಊಟ
ಅಮೃತದಂತಹ ಸ್ವೀಟ,
ಉಂಡ ಮೇಲೆ ಕಂಠ ಮಟ
ಊಟದ ಮೇಲೆಯೇ ಬಂದಿತ್ತು
ಜಿಗುಪ್ಸೆಯ ನೋಟ.

317 ನುಸಿ ಪೀಡೆ
-----------------
ಓ ನಾರೀ........ಕೇಳ
ನೋಡಿ ಕುಡಿ
ನಾರಿಕೇಳ
ಕೀಟ ಏರೈತಿ ಬಾಳ.

318 ದರ ಏರಿದಾಗ
------------------
ಕಂಡೋರು ಕೇಳಿದೋರು
ಎಲ್ಲಾರೂ ಬೆಳಿತಾರೆ
ವೆನಿಲ್ಲಾ,
ಕದ್ದು ಕೊಂಡೋದರೆ ಮಾತ್ರ
ಏನೂ ಇಲ್ಲಾ.

319 ಪೋಷಣೆ
---------------------
ಇಂಗ್ಲೀಷಿನ
ಬೀಜ ಬಿತ್ತಿ ಹೋದವರು
ಬ್ರಿಟೀಷರು,
ಅದಕೆ ನೀರು ಗೊಬ್ಬರ ಹಾಕಿ
ಪೋಷಿಸಿದವರು
ಭಾರತೀಯರು.

320 ಪುರಸ್ಕಾರ
-----------------
ಸ್ವಾತಂತ್ರ್ಯ ಯೋಧರ
ಚಳುವಳಿ,
ಇಂದಿನ ಪೀಳಿಗೆಗದು
ಬಳುವಳಿ.

321 ಕಳ್ಳಿ (ಮಾನಸ)
---------------------
ಮೊದಲ ನೋಟದಲ್ಲಿ
ಕದ್ದಳೆನ್ನ ಮನಸು,
ಅವಳೇ
ಕೆರೆತೋಟದ ಕೂಸು.

322 ಗುಂದದ ಕುಡಿ
---------------------
ದಟ್ಟ ಕಾನನದೊಳವಿತಿರುವ
ಹೆಣ್ಣೊಂದ
ಅಭಯಾರಣ್ಯ ಗುಂದದಲಿ
ನಾ ಕಂಡೆ,
ಥಳುಕು ಬಳುಕಿನಾ
ಈ ಸುಗಂಧದ ಕುಡಿಯು
ಹಬ್ಬೂತಲಿಹುದು
ಉಂಚಳ್ಳಿಯ ಕಡೆಗೆ.

ಸಂಕಟ
--------
ಭಾವನೆಗಳು
ಬಾಧಿಸಿದಾಗ
ನೋವುಗಳು
ನತರ್ಿಸುತ್ತವೆ.
------------------------------------------------------------------------------------------------------ ಕವಿ-ದತ್ತಗುರು ಕಂಠಿ,
ಪೊ-ಉಂಚಳ್ಳಿ
ತಾ-ಸಿರಸಿ, ಜಿ-ಉತ್ತರ ಕನ್ನಡ, 581318. ಮೊ-9483648230.
======================================================================================================�

No comments:

Post a Comment